Monday, June 9, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ ತಾಲೂಕಿನ ಕುಪ್ಪೆ ಸಮೀಪ ನೀಲಿಗಿರಿ ಗಿಡಗಳ ಕತ್ತರಿಸಿ ಕಳವು

ಸಾಲಿಗ್ರಾಮ ತಾಲೂಕಿನ ಕುಪ್ಪೆ ಸಮೀಪ ನೀಲಿಗಿರಿ ಗಿಡಗಳ ಕತ್ತರಿಸಿ ಕಳವು

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್‌ನಗರ: ಜಮೀನಿನಲ್ಲಿ ಬೆಳೆಯಲಾಗಿದ್ದ 200 ಕ್ಕು ಅಧಿಕ ನೀಲಿಗಿರಿ ಗಿಡಗಳನ್ನು ಕತ್ತರಿಸಿ ಅವುಗಳನ್ನು ಕಳವು ಮಾಡಿರುವ ಘಟನೆ ಕುಪ್ಪೆ ಗ್ರಾಮದ ಸಮೀಪ ಇರುವ ಜಮೀನಿನಲ್ಲಿ ನಡೆದಿದೆ. ದೊಡ್ಡಕೊಪ್ಪಲು ಗ್ರಾಮದ ಶಿವಪ್ಪ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೆಳೆಯಲಾಗಿದ್ದ ನೀಲಿಗಿರಿ ಗಿಡಗಳನ್ನು ಕತ್ತರಿಸಿ ಕಳವು ಮಾಡಲಾಗಿದ್ದು ಭಾನುವಾರ ರಾತ್ರಿ ಇಲ್ಲವೇ ಸೋಮವಾರ ಬೆಳಗಿನ ಸಮಯದಲ್ಲಿ ಈ ಘಟನೆ ನಡೆದಿರ ಬಹುದು ಎಂದು ಶಂಕಿಸಲಾಗಿದೆ.

ಸೋಮವಾರ ಬೆಳಿಗ್ಗೆ ಜಮೀನಿಗೆ ಹೋಗಿ ನೋಡಲಾಗಿ ಘಟನೆ ಪತ್ತೆಯಾಗಿದ್ದು ಹೊಗೆ ಸೊಪ್ಪು ಹದ ಮಾಡುವರು ಈ ಕೃತ್ಯ ಎಸಗಿರಬಹುದು ಎಂದು ಜಮೀನಿನ ಮಾಲೀಕ ಶಿವಪ್ಪ ಮಾಹಿತಿ ನೀಡಿದ್ದು, ಸುಮಾರು 10 ಸಾವಿರ ಮೌಲ್ಯದ ಗಿಡಗಳಾಗಿವೆ ಎಂದು ಅಂದಾಜಿಸಲಾಗಿದೆ.

ಗಸ್ತು ತಿರುಗಲು ಮನವಿ
ತಂಬಾಕು ಹದಗೊಳಿಸಲು ರೈತರು ಮತ್ತು ಸಾರ್ವಜನಿಕ ಸ್ಥಳದಲ್ಲಿ ಮರ-ಗಿಡಗಳನ್ನು ಬೆಳೆದ ಮರ-ಗಿಡಗಳನ್ನು ಕತ್ತರಿಸಿ ಕಳವು ಮಾಡುತ್ತಿರುವ ಪ್ರಕರಣಗಳನ್ನ ತಪ್ಪಿಸಲು ರಾತ್ರಿ ವೇಳೆ ಅರಣ್ಯ ಇಲಾಖೆಯವರು ಗಸ್ತು ತಿರುಗುವ ಮೂಲಕ ಮರ-ಗಿಡಗಳ ರಕ್ಷಣೆಗೆ ಮುಂದಾಗ ಬೇಕೆಂದು ಚಿಕ್ಕಕೊಪ್ಪಲು ಡೈರಿ ನಿರ್ದೇಶಕ ಅಂಬರೀಷ್ ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular