Friday, April 18, 2025
Google search engine

Homeರಾಜ್ಯನಟ ದರ್ಶನ ಅವರನ್ನು ಜೈಲಲ್ಲಿ ಯಾವತ್ತು ಭೇಟಿ ಮಾಡಲ್ಲ : ಜಮೀರ್

ನಟ ದರ್ಶನ ಅವರನ್ನು ಜೈಲಲ್ಲಿ ಯಾವತ್ತು ಭೇಟಿ ಮಾಡಲ್ಲ : ಜಮೀರ್

ಬಳ್ಳಾರಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಸದ್ಯ ಬಳ್ಳಾರಿ ಜಿಲ್ಲೆಯಲ್ಲಿ ಇದ್ದಾರೆ.ಇಂದು ಸಚಿವ ಜಮೀರ್ ಅಹ್ಮದ್ ಖಾನ್ ಬಳ್ಳಾರಿಗೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಬ್ಬರು ದರ್ಶನ್ ಬಳ್ಳಾರಿ ಜೈಲಿನಲ್ಲಿ ಇರುವುದಕ್ಕೆ ಬಳ್ಳಾರಿಗೆ ಬಂದಿಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಜೈಲಲ್ಲಿ ದರ್ಶನ್ ಅವರನ್ನು ಭೇಟಿ ಮಾಡಲ್ಲ ಎಂದು ತಿಳಿಸಿದರು.

ಬಳ್ಳಾರಿ ಜೈಲಲ್ಲಿ ದರ್ಶನ್ ಇರುವ ಕಾರಣಕ್ಕೆ ಬಂದಿರಲಿಲ್ಲ ಎಂಬ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ದರ್ಶನ್ ಇರುವ ಕಾರಣಕ್ಕೆ ಬಳ್ಳಾರಿಗೆ ಬಂದಿಲ್ಲ ಅನ್ನೋದು ಸುಳ್ಳು. ಆದರೆ ಜೈಲಲ್ಲಿ ನಾನು ಯಾವುದೇ ಕಾರಣಕ್ಕೂ ನಟ ದರ್ಶನ್ ಭೇಟಿ ಮಾಡಲ್ಲ ಎಂದು ಅವರು ತಿಳಿಸಿದರು.

ಇನ್ನು ಮೈಸೂರಿನಲ್ಲಿ ದಲಿತ ಕಾಂಗ್ರೆಸ್ ನಾಯಕರಿಂದ ಮೀಟಿಂಗ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆಗ ಸಚಿವ ಎಸ್ ಸಿ ಮಹದೇವಪ್ಪ ಮನೆಗೆ ಹೋಗಿದ್ದಾರೆ. ಸಚಿವರ ಭೇಟಿಯ ವೇಳೆ ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ. ಸಚಿವರು ಸಭೆ ಸೇರಿದ್ದು ರಾಜಕೀಯ ಉದ್ದೇಶಕಲ್ಲ. ಜಾತಿಗಣತಿ ವರದಿ ಜಾರಿ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular