ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ಪಟ್ಟಣದ ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ನ 2025ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ನ್ನು ಪತ್ರಕರ್ತ ಕೆ.ಟಿ.ಮೋಹನ್ ಕುಮಾರ್ ಬಿಡುಗಡೆ ಮಾಡಿದರು.
ಈ ಸಂಧರ್ಭದಲ್ಲಿ ಸಹಕಾರ ಇಲಾಖೆಯ ಪವನ್ ಕುಮಾರ್, ಮಹದೇವ್, ಗ್ರಾಫಿಕ್ ಚಿತ್ರಕಲಾವಿದ ಎಸ್.ಜೆ.ಗಣೇಶ, ಸೊಸೈಟಿಯ ಅಧ್ಯಕ್ಷ ಕೆ.ಆರ್.ಶ್ಯಾಮಸುಂದರ್, ಉಪಾಧ್ಯಕ್ಷೆ ಭಾಗ್ಯಗುರುರಾಜ್, ನಿರ್ದೇಶಕರುಗಳಾದ ಎಂ.ಎಸ್.ನರಸಿಂಹ, ಶಶಿಕುಮಾರ್, ಮಂಜುನಾಥ್, ಕೆ.ಎಸ್.ರಾಜೇಶ್, ಎಂ.ಎಸ್.ಕುಮಾರ್, ಶಿವರಾಜ್ ಕುಮಾರ್, ಶೃತಿ ಶ್ರೀನಿವಾಸಗೌಡ, ಮಂಜುಳಾ ಕನಕರಾಜು, ಎಸ್.ಕೆ.ಕಮಲ, ಸಿಇಓ ಸಿಂಧು ಮಂಜುನಾಥ್, ಸಿಬ್ಬಂದಿ ಮಮತಾ ಪಾಲ್ಗೊಂಡಿದ್ದರು.