Wednesday, November 12, 2025
Google search engine

Homeರಾಜ್ಯಸುದ್ದಿಜಾಲಬೆಳಗಾವಿ ಅಧಿವೇಶನದಲ್ಲಿ ಭತ್ಯೆ, ವಸತಿ, ಉಚಿತ ಊಟ ಸ್ವೀಕರಿಸಲ್ಲ: ಸ್ಪೀಕರ್‌ಗೆ ಶರಣಗೌಡ ಕಂದಕೂರ್ ಪತ್ರ.

ಬೆಳಗಾವಿ ಅಧಿವೇಶನದಲ್ಲಿ ಭತ್ಯೆ, ವಸತಿ, ಉಚಿತ ಊಟ ಸ್ವೀಕರಿಸಲ್ಲ: ಸ್ಪೀಕರ್‌ಗೆ ಶರಣಗೌಡ ಕಂದಕೂರ್ ಪತ್ರ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ ಅಧಿವೇಶನದಲ್ಲಿ ಯಾವುದೇ ರೀತಿಯ ಭತ್ಯೆ, ಊಟ, ವಸತಿ ಸೌಕರ್ಯವನ್ನು ಸ್ವೀಕಾರ ಮಾಡುವುದಿಲ್ಲ ಎಂದು ಸ್ಪೀಕರ್ ಯು.ಟಿ ಖಾದರ್ ಅವರಿಗೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಅವರು ಪತ್ರವನ್ನು ಬರೆದಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳ ರೈತರು, ಬಡುವರು, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ ಆಗುತ್ತಿಲ್ಲ. ಕೇವಲ ಅಧಿವೇಶನದಲ್ಲಿ ನಮಗೆ ಸಮಯ ಸಿಕ್ಕರೆ ಮಾತಾಡಿ ಕಾಡಿ, ಬೇಡಿ ಹೋಗುವ ಪರಿಸ್ಥಿತಿ ಇದೆ. ಹೀಗಾಗಿ ಈ ಬಾರಿ ಯಾವುದೇ ಭತ್ಯೆಯನ್ನು ಸ್ವೀಕರಿಸಲ್ಲ ಎಂದಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಯಾವುದೇ ಭತ್ಯೆ ಸ್ವೀಕರಿಸುವುದಿಲ್ಲ ಎಂದು ಸ್ಪೀಕರ್‌ ಯು.ಟಿ ಖಾದರ್ ಅವರಿಗೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಪತ್ರ ಬರೆದಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಾಸಕ ಕಂದಕೂರ್ ಅವರು ಸ್ಪೀಕರ್‌ ಖಾದರ್ ಅವರಿಗೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ಅಧಿವೇಶನಕ್ಕೆ ಭಾಗವಹಿಸುವ ಸಂದರ್ಭದಲ್ಲಿ ಯಾವುದೇ ಭತ್ಯೆ, ವಸತಿ ಸೌಕರ್ಯ ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ. ಕಲಾಪದ ವೇಳೆ ನೀಡುವ ಚಹಾ, ಉಪಹಾರ, ಊಟವೂ ಮಾಡುವುದಿಲ್ಲ. ಆದರೆ ನಮಗೆ ಹೊರಗಿನಿಂದ ತರಿಸಿಕೊಂಡು ಬಳಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ?

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಬೆಳಗಾವಿಯಲ್ಲಿ ಕಳೆದ ಸಲ ನಡೆದ ಚಳಿಗಾಲದ ಅಧಿವೇಶನದ ವೇಳೆ ನಾನು ಕಲಾಪದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದಂತೆಯೇ ಈ ಸಲದ ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಿದ್ದಾಗ ಸರ್ಕಾರ ನನಗೆ ನೀಡುವ ಯಾವುದೇ ತರಹದ ಭತ್ಯೆ (ಟಿಎ, ಡಿಎ) ಪಡೆಯುವುದಿಲ್ಲ. ಅಷ್ಟೆ ಅಲ್ಲ, ವಸತಿ ವ್ಯವಸ್ಥೆ ಪಡೆಯುದಿಲ್ಲ ಮತ್ತು ಕಲಾಪದ ವೇಳೆ ನೀಡುವ ಚಹಾ, ಉಪಹಾರ, ಊಟವೂ ಮಾಡುವುದಿಲ್ಲ. ಆದರೆ ನಮಗೆ ಹೊರಗಿನಿಂದ ತರಿಸಿಕೊಂಡು ಬಳಸಲು ಅನುವು ಮಾಡಿಕೊಡಬೇಕು. ಉತ್ತರ ಕರ್ನಾಟಕದ ಸಮಸ್ಯೆ ಮತ್ತು ಬೇಡಿಕೆಗಳಿಗೆ ಪ್ರಮುಖ ಧ್ವನಿಯಾಗಲು ಬೆಳಗಾವಿಯಲ್ಲಿ 25 ರಿಂದ 30 ಕೋಟಿ ರೂ.ವೆಚ್ಚ ಮಾಡಿ ಪ್ರತಿ ವರ್ಷವು ನಡೆಸುವ ಚಳಿಗಾಲದ ಅಧಿವೇಶನದಿಂದ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂಬ ವೈಯಕ್ತಿಕ ಅಭಿಪ್ರಾಯ ನನ್ನದು. ಕಳೆದ ಅಧಿವೇಶನದಲ್ಲಿ ನಡೆದ ಚರ್ಚೆಗಳ ವಿಷಯಗಳ ಕುರಿತು ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಏನು ಎಂಬ ಬಗ್ಗೆ ರಾಜ್ಯದ ಜನತೆಗೆ ಇದುವರೆಗೂ ತಿಳಿಸಿಲ್ಲ. ಕಾರಣ, ಕೇವಲ ಚರ್ಚೆ. ಮಾತುಗಳಿಂದ ಜನರ ಕಲ್ಯಾಣ ಅಸಾಧ್ಯ ಮತ್ತು ಕಟುಸತ್ಯವು ಹೌದು, ಇದು ಒಂದು ನಮೂನಿ ಕಾಲಹರಣ ಮಾಡಿದಂತೆಯೇ ಆಗುತ್ತಿದೆ ಮತ್ತು ಎರಡು ವಾರ ಪ್ರವಾಸ ಬಂದತೆಯೇ ಆಗುತ್ತಿದೆ ಎಂಬುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಇತ್ತೀಚಿಗೆ ಸತತ ಮಳೆ ಮತ್ತು ಪ್ರವಾಹ ಬಂದು ಲಕ್ಷಾಂತರ ರೈತರ ಕೋಟ್ಯಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿದ್ದರೂ ಇಂದಿಗೂ ಸರ್ಕಾರ ಒಂದು ನೈಯಾ ಪೈಸೆ ಬಿಡುಗಡೆ ಮಾಡಿಲ್ಲ. ರಾಜ್ಯದ ಜನರು, ಅದರಲ್ಲೂ ಸಮಸ್ತ ಉತ್ತರ ಕರ್ನಾಟಕ ಜಿಲ್ಲೆಗಳ ರೈತರು, ಬಡುವರು, ಕಾರ್ಮಿಕರು ಮತ್ತು ಜನ ಸಾಮಾನ್ಯರು ಹತ್ತು, ಹಲವು ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಮ್ಮ ಪ್ರತಿನಿಧಿಯಾಗಿ ಶಾಸಕರೆಂಬ ಪಟ್ಟ ಹೊತ್ತು ವಿಧಾನಸಭೆ ಹೋಗಿರುವ ಎಂಎಲ್‌ಎ ಸಾಹೇಬರು ಕ್ಷೇತ್ರದ, ತಾಲೂಕಿನ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು ಹೊಸ, ಹೊಸ ಕೆಲಸಗಳು ಮಾಡುವ ಮೂಲಕ ಕನಸು ನನಸು ಮಾಡುತ್ತಾರೆಂಬ ಭರವಸೆ ಹೊಂದಿದ್ದಾರೆ.

ಆದರೆ, ನಾವಿಲ್ಲಿ ಸಮಯ ಸಿಕ್ಕರೆ ಬರಿ ಮಾತಾಡಿ ಕಾಡಿ, ಬೇಡಿ ಹೋಗುವುದೇ ಆಗುತ್ತಿದೆ. ಹೀಗಾಗಿ ಇಂತಹ ವೇಳೆ ಸರ್ಕಾರ ನೀಡುವ ಈ ಅಧಿವೇಶನದ ವೇಳೆಯ ಯಾವುದೇ ತರಹದ ಸೌಲಭ್ಯ ಪಡೆಯದಿರಲು ಹಿಂದೆ ಹೇಳಿದಂತೆಯೇ ನಿರ್ಧಾರ ಮಾಡಿದ್ದೇನೆ.

RELATED ARTICLES
- Advertisment -
Google search engine

Most Popular