ಗುಂಡ್ಲುಪೇಟೆ: ರಾಜ್ಯ ಸರ್ಕಾರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಆರು ತಿಂಗಳನ್ನು ಪೂರೈಸುತ್ತಾ ಬಡವರ,ದೀನದಲಿತರ,ಹಿಂದುಳಿದವರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅದನ್ನ ಸಮರ್ಪಕವಾಗಿ ಪೂರೈಸುತ್ತಿದೆ .ಆದರೇ ಇವರ ಕಾರ್ಯಕ್ರಮಗಳನ್ನ ಸಹಿಸದ ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವುದೇ ರೀತಿಯ ಅನುದಾನವನ್ನು ನೀಡುತ್ತಿಲ್ಲ ಹಾಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೇ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡುವಲ್ಲಿ ನಾವೆಲ್ಲರೂ ಶ್ರಮ ವಹಿಸಬೇಕಾಗಿದೆ..ಪ್ರತಿಯೊಬ್ಬರು ರಾಜ್ಯದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಸಿದ್ದರಾಮಯ್ಯನವರ ಸರ್ಕಾರವನ್ನ ಬೆಂಬಲಿಸಿ ಎಂದು ಗುಂಡ್ಲುಪೇಟೆ ಪಟ್ಟಣದಲ್ಲಿ ಎಂ.ಎಲ್.ಸಿ ಮರಿತಿಬ್ಬೇಗೌಡ ತಿಳಿಸಿದರು.