Wednesday, April 9, 2025
Google search engine

Homeರಾಜ್ಯಸುದ್ದಿಜಾಲಶಾಲೆಗೊಂದು ಸೇವಾದಳ ಶಾಖೆ ತೆರೆಯಿರಿ: ಬಿ.ಇ.ಒ.ಶಿವರಾಜ್

ಶಾಲೆಗೊಂದು ಸೇವಾದಳ ಶಾಖೆ ತೆರೆಯಿರಿ: ಬಿ.ಇ.ಒ.ಶಿವರಾಜ್

ಹನೂರು: ಪ್ರಸ್ತುತ ರಾಷ್ಟ್ರೀಯತೆಯ ಮಹತ್ವ ದಿನೇ ದಿನೇ ಹೆಚ್ಚಾಗುತ್ತಿದ್ದು, ಮಕ್ಕಳಲ್ಲಿ ದೇಶಪ್ರೇಮವನ್ನು ಹುಟ್ಟುಹಾಕಲು ಪ್ರತಿ ಶಾಲೆಯಲ್ಲಿ ಸೇವಾದಳದ ಶಾಖೆಗಳನ್ನು ತೆರೆಯುವಂತೆ ಬಿ.ಇ.ಒ.ಶಿವರಾಜ್  ತಿಳಿಸಿದರು

ಭಾರತ ಸೇವಾದಳ ತಾಲ್ಲೂಕು ಸಮಿತಿ ಹಾಗೂ ಶಾಲಾ ಶಿಕ್ಷಣ ಹನೂರು ಇವರ ಸಂಯುಕ್ತ ಆಶ್ರಯದಲ್ಲಿ   ಉನ್ನತೀಕರಿಸಿದ ಮಾದರೀ ಶಾಲೆಯಲ್ಲಿ  ನಡೆದ ಶಿಕ್ಷಕರ ಒಂದು ದಿನದ ಪುನರ್ ಚ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ಸೇವಾದಳ ಸಂಸ್ಥೆ ಸ್ವಾತಂತ್ರ್ಯ ಗಳಿಸಲು ಹಿಂದೂಸ್ತಾನಿ ಸೇವಾದಳದ ಹೆಸರಿನಲ್ಲಿ ಸಂಘಟನೆಯಾಗಿ ಸ್ವಾತಂತ್ರ್ಯ ಭಾರತದಲ್ಲಿ ಭಾರತ ಸೇವಾದಳ ಎಂಬ ಹೆಸರಿನಿಂದ, ಸ್ವಾತಂತ್ರ್ಯ ಉಳಿಸಲು ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಧ್ವಜ, ಗೀತೆ, ರಾಷ್ಟ್ತೀಯ ಭಾವೈಕ್ಯತಾ ಮೇಳ, ಮಕ್ಕಳ‌ನಾಯಕತ್ವ ಶಿಬಿರಗಳನ್ನು ನಡೆಸುತ್ತಾ ಬಂದಿರುವ ಭಾರತ ಸೇವಾದಳ ಪ್ರತಿಶಾಲೆಯಲ್ಲಿ ಶಿಕ್ಷಕರು ಶಾಖೆಗಳನ್ನು ತೆರೆದು ಮಕ್ಕಳಲ್ಲಿ ದೇಶಪ್ರೇಮವನ್ನು ಬೆಳೆಸುವಂತೆ ತರಬೇತಿ ಶಿಕ್ಷಕರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾದಳದ ತಾಲ್ಲೂಕು ಸಮಿತಿ ಅಧ್ಯಕ್ಷ ಪುರಂದರರಾಮ್,  ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ್,   ಸೇವಾದಳ ಉಪಾಧ್ಯಕ್ಷ ಗಿರೀಶ್, ಜಿಲ್ಲಾ ಸಂಘಟಕ ಇ.ಅರುಣ್, ರಾಜ್ಯ   ಸಂಪನ್ಮೂ ಶಿಕ್ಷಕ ಪಳನಿಸ್ವಾಮಿ ಜಾಗೇರಿ, ಅಧಿನಾಯಕ ಜೋಸೇಫ್, ಕಾರ್ಯದರ್ಶಿ ಸೆಂದಿಲ್ ಕುಮಾರ್,    ಧರ್ಮಲಿಂಗಮ್,  ಅಬ್ದುಲ್ ಜಮೀರ್, ರೋಜ್ ಮೇರಿ, ಪ್ರದೀಪ್ ಕುಮಾರ್, ಮದಳಿಯಮ್ಮಾಳ, ಧನರಾಜ್ ಮೋಚರಾಗಿಣಿ, ಮರಿಯಮದಳಿಯಮ್ಮ ರಾಜಪ್ಪ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular