ಮಂಗಳೂರು(ದಕ್ಷಿಣ ಕನ್ನಡ): ಬ್ಯಾರಿ ಎಲ್ತ್ ಗಾರ್ತಿಮಾರೊ ಕೂಟದ ವತಿಯಿಂದ ಮೊದಲ ಬಾರಿಗೆ ‘ಒರ್ಮೆಪ್ಪಾಡ್ -2023’ ಎಂಬ ವಿಶೇಷ ಕಾರ್ಯಕ್ರಮವು ಮಂಗಳೂರು ನಗರದ ಸಮೀಪದ ಅಡ್ಯಾರ್ ಬರಕಾ ಇಂಟರ್ ನ್ಯಾಶನಲ್ ಸ್ಕೂಲ್ ಆವರಣದಲ್ಲಿ ನವೆಂಬರ್ ಐದರ ರವಿವಾರ ಬೆಳಗ್ಗೆಯಿಂದ ಸಂಜೆಯವರೆಗೂ ನಡೆಯಲಿದೆ.
‘ಕುಸಾಲ್-ಕಲಿ-ಸಾಹಿತ್ಯ’ ಎಂಬ ಧ್ಯೇಯದಡಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬ್ಯಾರಿ ಸಮುದಾಯದ ಲೇಖಕಿಯರು, ಕವಿಯತ್ರಿಯರು, ಬರಹಗಾರ್ತಿಯರು ಒಂದುಗೂಡಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂವಾದ, ಕವಿಗೋಷ್ಟಿ ಸೇರಿದಂತೆ ಇನ್ನಿತರ ಸ್ಪರ್ಧೆಗಳು ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.