ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಪವಿತ್ರಾಗೌಡಗೆ ಲಿಫ್ಟ್ ಸ್ಟಿಕ್ ಹಚ್ಚಲು ಅವಕಾಶ ಕೊಟ್ಟಿದ್ದ ಮಹಿಳಾ ಪಿಎಸ್ ಐಗೆ ನೋಟಿಸ್ ಜಾರಿ ಮಾಡಲಾಗಿದೆ.
ಜೂನ್ ೧೫ ರಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಪವಿತ್ರಾಗೌಡ ಮನೆ ಮಹಜರು ಮಾಡಿದ್ದರು. ಈ ವೇಳೆ ಪವಿತ್ರಾಗೌಡಗೆ ಲಿಫ್ಟ್ ಸ್ಟಿಕ್ ಹಚ್ಚಲು ಮಹಿಳಾ ಪಿಎಸ್ ಐ ಅವಕಾಶ ಮಾಡಿಕೊಟ್ಟಿದ್ದರು. ಬಳಿಕ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮಹಿಳಾ ಪಿಎಸ್ ಐಗೆ ನೋಟಿಸ್ ನೀಡಲಾಗಿದೆ.
ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ಮಹಿಳಾ ಪಿಎಸ್ ಐ ಪವಿತ್ರಾಗೌಡಗೆ ಲಿಫ್ಟ್ ಸ್ಟಿಕ್ ಹಚ್ಚಲು ಅವಕಾಶ ಮಾಡಿಕೊಟ್ಟ ಹಿನ್ನೆಲೆ ಮಹಿಳಾ ಪಿಎಸ್ ಐಗೆ ನೋಟಿಸ್ ನೀಡಿದ್ದಾರೆ.