ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಸುರೇಂದ್ರ ಮೂರ್ತಿ ಅಧಿಕಾರ ವಹಿಸಿಕೊಂಡರು.
ಲೋಕಸಭಾ ಚುನಾವಣೆ ಹಿನ್ನೆಲೆ ಈ ಹಿಂದೆ ಪಿರಿಯಾಪಟ್ಟಣ ತಹಶೀಲ್ದಾರ್ ಆಗಿದ್ದ ಕುಂ ಇ ಅಹಮದ್ ರನ್ನು ಸರ್ಕಾರ ವರ್ಗಾವಣೆ ಮಾಡಿ ಅವರ ಸ್ಥಳಕ್ಕೆ ಮಾಗಡಿ ತಾಲೂಕಿನಲ್ಲಿ ತಹಶೀಲ್ದಾರ್ ಆಗಿದ್ದ ಸುರೇಂದ್ರ ಮೂರ್ತಿ ಅವರನ್ನು ನಿಯೋಜಿಸಿದೆ, ನೂತನ ತಹಶೀಲ್ದಾರ್ ರನ್ನು ತಾಲೂಕು ಆಡಳಿತ ಕಚೇರಿ ಸಿಬ್ಬಂದಿ ಸ್ವಾಗತಿಸಿದರು.