Thursday, June 5, 2025
Google search engine

Homeಅಪರಾಧಹಣ ಡಬಲ್ ಮಾಡಿಕೊಡುವ ನೆಪದಲ್ಲಿ ₹3.25 ಲಕ್ಷದ ಮೋಸ: ಒಬ್ಬರ ವಿರುದ್ಧ ಪೊಲೀಸ್ ದೂರು

ಹಣ ಡಬಲ್ ಮಾಡಿಕೊಡುವ ನೆಪದಲ್ಲಿ ₹3.25 ಲಕ್ಷದ ಮೋಸ: ಒಬ್ಬರ ವಿರುದ್ಧ ಪೊಲೀಸ್ ದೂರು

ಭಟ್ಕಳ: ಮುರುಡೇಶ್ವರದ ಗುತ್ತಿಗೆದಾರನೋರ್ವನಿಗೆ ಹಣ ಡಬಲ್ ಮಾಡಿಕೋಡುತ್ತೇನೆಂದು ನಂಬಿಸಿ 3.25 ಲಕ್ಷ ಹಣ ಪಡೆದು ಮೋಸ ಮಾಡಿರುವ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲಾಗಿದೆ.

ಭಟ್ಕಳದ ಗುಳ್ಮಿ ಬಿಳಾಲಖಂಡ ನಿವಾಸಿ ಪೈಂಟಿಂಗ್ ಕೆಲಸ ಮಾಡುವ ಮೊಹಮ್ಮದ ಶಬ್ಬಿರ ಎಂಬಾತನು ಮುರುಡೇಶ್ವರ ಜೋಗಿಮನೆ ಹೀರೋದೋಮಿ ನಿವಾಸಿ ಗುತ್ತಿಗೆದಾರ ಮಂಜುನಾಥ ಸಂಕಯ್ಯ ನಾಯ್ಕ ಬಳಿ ಮೇ. 27ರಂದು ಹಣ ಡಬಲ್ ಮಾಡಿಕೋಡುತ್ತೇನೆಂದು ನಂಬಿಸಿ 2.10 ಲಕ್ಷ ಹಾಗೂ ಮೇ. 29ರಂದು 1.15 ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದು, ಈಗ ಹಣ ಡಬಲ್ ಆಗದೇ ಸಿಂಗಲ್ ಹಣವನ್ನು ನೀಡದೇ ಸತಾಯಿಸುತ್ತಿರುವ ಕುರಿತು ಮಂಜುನಾಥ ನಾಯ್ಕ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣವನ್ನ ದಾಖಲಿಸಿಕೊಂಡ ಮುರ್ಡೇಶ್ವರ ಪೊಲೀಸ್ ಸಬ್ ಇನ್ಸಪೆಕ್ಟರ್ ಹಣಮಂತ ಬೀರಾದಾರ ಅವರು ಎಸ್.ಪಿ.ಎಂ. ನಾರಾಯಣ, ಹೆಚ್ಚುವರಿ ಎಸ್.ಪಿ.ಜಗದೀಶ ಎಂ. ಹಾಗೂ ಡಿವೈಎಸ್ಪಿ ಮಹೇಶ ಎಂ. ಅವರ ಮಾರ್ಗದರ್ಶನದಲ್ಲಿ ತನಿಖೆಯನ್ನು ಕೈಗೊಂಡು ಮಹಮ್ಮದ್ ಶಬ್ಬೀರ್ ಈತನನ್ನು ಬಂಧಿಸಲು ಯಶಸ್ವೀಯಾಗಿದ್ದಾರೆ. ಮಹಮ್ಮದ್ ಶಬ್ಬೀರ್ ಬಳಿಯಲ್ಲಿ ಇದ್ದ 50 ಸಾವಿರ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ, ವಿಜಯ ನಾಯ್ಕ, ಮಂಜುನಾಥ ಮಡಿವಾಳ, ಸಿದ್ಧಪ್ಪ ಕಾಂಬಳೆ, ಫರೀದ್ ಚಿಗರಳ್ಳಿ, ಲೋಕಪ್ಪ ಮುಂತಾದವರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular