ತುಮಕೂರು: ನಕ್ಸಲರಿಂದ ಪೊಲೀಸರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷಗಳ ಬಳಿಕ ಐವರು ಆರೋಪಿಗಳನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಗಂತಿಮೇರಿಯ ನಾಗರಾಜ್ (40), ಧರ್ಮಾವರಂನ ಪದ್ಮಾ(35) ತಾಮಗಿರಿಯ ಬೋಯ ಓಬಳೇಶ್ (40) ರಾಮಮೋಹನ್(42) ಹಾಗೂ ಆಂಜನೇಯಲು (44) ಬಂಧಿತರು.
2005 ಫೆಬ್ರವರಿ 11ರಂದು ಪೊಲೀಸರ ಹತ್ಯಾಕಾಂಡ ಘಟನೆ ನಡೆದಿದ್ದು, ಘಟನೆಯಲ್ಲಿ 7 ಜನ ಪೊಲೀಸರು ಸೇರಿ ಓರ್ವ ನಾಗರಿಕ ಬಲಿಯಾಗಿದ್ದ.