ರಾಮನಗರ: ೬೬ಕೆವಿ ಕನಕಪುರ-ಸೋಮನಹಳ್ಳಿ-೧ ಮಾರ್ಗದ ತ್ರೈಮಾಸಿಕಾ ನಿರ್ವಹಣಾಕಾಮಗಾರಿ ಮತ್ತು ೬೬/೧೧ ಕೆವಿ ಛತ್ರ, ಮರಳವಾಡಿ ಮತ್ತು ಗೋದೂರು ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕಾ ನಿರ್ವಹಣಾಕಾಮಗಾರಿ ಕೈಗೊಂಡಿರುವ ಕಾರಣ ನ.೨೩ರ ಗುರುವಾರ ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯ ವರೆಗೆ ಸುನಿಕ್ಷಾಸೋಲಾರ್ ಪವರ್ ಪ್ಲಾಂಟ್ (ಐಪಿಪಿ), ಬನವಾಸಿ, ದ್ಯಾವಸಂದ್ರ, ತುಂಗಣಿ, ಕಲ್ಲಹಳ್ಳಿ, ಬೂದಿಗುಪ್ಪೆ, ದೊಡ್ಡಮರಳವಾಡಿ, ಟಿ. ಹೊಸಹಳ್ಳಿ, ಯಲಚವಾಡಿ, ಬನವಾಸಿ, ತೋಕಸಂದ್ರ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸುತ್ತಮುತ್ತಲಿನ ಗ್ರಾಮಗಳು ಮತ್ತುಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಕಂಪನಿಯ ಕನಕಪುರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.