Tuesday, April 15, 2025
Google search engine

Homeರಾಜ್ಯಅಧಿಕಾರ ಹಂಚಿಕೆ ವಿಚಾರ: ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ: ಸಚಿವ ಮುನಿಯಪ್ಪ

ಅಧಿಕಾರ ಹಂಚಿಕೆ ವಿಚಾರ: ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ: ಸಚಿವ ಮುನಿಯಪ್ಪ

ಬೆಂಗಳೂರು: ಹೈಕಮಾಂಡ್‌ನಲ್ಲಿ ಆಗಿರುವ ತೀರ್ಮಾನದ ವಿಚಾರ ಸಿಎಂ ಹಾಗೂ ಡಿಸಿಎಂಗೆ ಗೊತ್ತು. ಹೈಕಮಾಂಡ್ ಕಾಲಕಾಲಕ್ಕೆ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

ಅಧಿಕಾರ ಹಂಚಿಕೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ನಲ್ಲಿ ಆಗಿರುವ ತೀರ್ಮಾನದ ವಿಚಾರ ಅವರಿಬ್ಬರಿಗೆ ಗೊತ್ತು. ಎಲ್ಲವನ್ನ ಕೇಳಬೇಕಿರೋದು, ಮುಖ್ಯಮಂತ್ರಿಗಳು, ಅಧ್ಯಕ್ಷರನ್ನ ಮಾತ್ರ. ಬೇರೆ ಯಾರನ್ನೂ ಕೇಳಬೇಡಿ ಹೇಳಿದರು. ನಾನು ಹೇಳಿದ್ದಕ್ಕೆ ವಿರುದ್ಧವಾಗಿ ಬರೆಯಲಾಗಿದೆ. ಅಧ್ಯಕ್ಷರು ಬಂಡೆ ಇದ್ದ ಹಾಗೇ ಕಡೆಯವರೆಗೂ ನಿಮ್ಮ ಜೊತೆ ಇರ್ತೀವಿ ಅಂತ ಹೇಳಿದ್ರು. ಅದು ಸರಿ ಅಂತ ನಾನು ಹೇಳಿದ್ದೆ. ಆದರೆ, ಅದಕ್ಕೆ ವಿರುದ್ಧವಾಗಿ ಬರೆಯಲಾಗಿದೆ. ಈಗ ಅದರ ಬಗ್ಗೆ ಮತ್ತೆ ಮಾತನಾಡುವುದು ಬೇಡ. ಹೈಕಮಾಂಡ್ ತೀರ್ಮಾನದಂತೆ ಹೋಗೋಣ ಎಂದರು.

ಹೈಕಮಾಂಡ್ ಏನ್ ಮಾಡಿದ್ರು ಬದ್ಧವಾಗಿರುತ್ತೇವೆ. ನಾವು ಹೈಕಾಮಾಂಡ್ ಜೊತೆ ಡಿಸಿಪ್ಲೀನ್ ಕಮಿಟಿಯಲ್ಲಿದ್ದವನು. ಕೇಂದ್ರದಲ್ಲಿ ೩೦ ವರ್ಷ ಕೆಲಸ ಮಾಡಿದವನು. ನಾನು ಡಿಸಿಪ್ಲೀನ್ ಸೋಲ್ಜರ್ ಆಗಿ ಕೆಲಸ ಮಾಡಿದ್ದೀನಿ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular