Sunday, June 15, 2025
Google search engine

Homeರಾಜ್ಯಸುದ್ದಿಜಾಲಮೂಳೆಗಳು ಜೀವನ ಪೂರ್ತಿ ಸದೃಢವಾಗಿರಬೇಕಾದರೆ ಸರಿಯಾದ ಆಹಾರಪದ್ಧತಿ ಮತ್ತು ಜೀವನ ಶೈಲಿ ಅತ್ಯಗತ್ಯ : ಡಾ....

ಮೂಳೆಗಳು ಜೀವನ ಪೂರ್ತಿ ಸದೃಢವಾಗಿರಬೇಕಾದರೆ ಸರಿಯಾದ ಆಹಾರಪದ್ಧತಿ ಮತ್ತು ಜೀವನ ಶೈಲಿ ಅತ್ಯಗತ್ಯ : ಡಾ. ಸಿಂಧು ಬಿ.

ಹುಣಸೂರು: ನಿಮ್ಮ ಮೂಳೆಗಳು ಜೀವನ ಪೂರ್ತಿ ಸದೃಢ ವಾಗಿರಬೇಕಾದರೆ. ಆಹಾರಪದ್ಧತಿ ಸರಿ ಇರಬೇಕು ಆಗ ಮಾತ್ರ ನಿಮ್ಮ ದೇಹ ಆರೋಗ್ಯ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವೆಂದು ಅಪೋಲೊ ಆಸ್ಪತ್ರೆಯ ಡಾ.ಸಿಂಧು ಬಿ. ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಕರ್ತರಿಗೆ ಮತ್ತು ಕುಟುಂಬಕ್ಕೆ ಹಮ್ನಿಕೊಂಡಿದ್ದ ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಅವರು, ನಾವುಗಳು ಸರಿಯಾದ ಆಹಾರ ಪದ್ದತಿ ಅನುಸರಿಸದಿದ್ದರೆ. ಆಸ್ಟಿಯೊಪೊರೋಸಿಸ್‌ ಸಮಸ್ಯೆಯಿಂದ ಮೂಳೆಗಳು ಪೊಳ್ಳಾಗಲಿವೆ. ಆದ್ದರಿಂದ 40 ವರುಷ ದಾಟುವ‌ ಮುನ್ನ ಬಿಎಂಡಿ ಪರೀಕ್ಷೆ ಅಗತ್ಯವಿದೆ ಎಂದರು.

ಪ್ರತಿಯೊಬ್ಬರು ಬಿಎಂಡಿ ಪರೀಕ್ಷೆ ಮಾಡಸಿಕೊಳ್ಖುವುದರಿಂದ ನಿಮ್ಮ ಮೂಳೆಗಳ ದುಸ್ಥಿತಿಯ ಬಗ್ಗೆ ತಿಳಿಯಲಿದೆ. ನಿಮ್ಮ ಮೂಳೆಗಳು ಟೊಳ್ಳಾಗಬಾರದು ಎಂದರೆ ಪಾಸ್ಟ್ ಪುಡ್, ತಂಬಾಕು, ಗುಟುಕ, ದೂಮಪಾನ, ಮದ್ಯಪಾನದಂತಹ ದುಶ್ಚಟಗಳಿಂದ ದೂರವಿದ್ದಾಗ ಮೂಳೆಗಳು ಸೆವೆಯುವ, ಬೆಣ್ಣೆಯಂತೆ ಮೃದು ಆಗುವ ಸಾಂದ್ರತೆ ಕಡಿಮೆಯಾಗಲಿದೆ ಎಂದರು.

ನೀವು ನಿತ್ಯ ಸೇವಿಸುವ ಆಹಾರದಲ್ಲಿ ಮುದ್ದೆ, ರೈಸ್, ಚಪಾತಿಯ ಜತೆಗೆ . ಮೊಟ್ಟೆ, ಹಾಲು, ನಟ್, ನೀರು, ಕ್ಯಾಲ್ಸಿಯಂ, ಫ್ರೂಟ್ಸ್, ತರಕಾರಿಗಳ ಸೇವಿಸುವುದರ ಜತೆಗೆ ನಿರಂತರ ವ್ಯಾಯಾಮ, ನಡಿಗೆಯೊಂದಿಗೆ ನಿಮ್ಮ ದೇಹದ ತೂಕ ನಿತ್ಯ ಮೂಳೆಗಳ ಮೇಲೆ ಇದ್ದರೆ ಉತ್ತಮ ಆರೋಗ್ಯ ನಿಮ್ಮದಾಗಲಿದೆ, ಎಂದು ಸಲಹೆ ನೀಡಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಮನುಷ್ಯನಿಗೆ ಇತ್ತೀಚಿಗೆ ಆರೋಗ್ಯವೇ ಭಾಗ್ಯವಾಗಿದ್ದು, ಯಾಂತ್ರಿಕ ಜೀವನದಲ್ಲಿ ಜನತೆ ಹಣ ಮಾಡುವ ದಿಶೆಯಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಲಾಗುತ್ತಿದೆ. ಹಣಕಿಂತ ಆರೋಗ್ಯ ಅಮೂಲ್ಯವಾಗಿದ್ದು. ಪತ್ರಕರ್ತರಿಗೆ ಆರೋಗ್ಯ ಸಿಗಬೇಕು ಎಂಬ ಆಶಯ ನನ್ನದಾಗಿದೆ ಎಂದರು. ಅದಕ್ಕೆ ಪೂರಕವಾಗಿ, ಅಪೋಲೊ ಆಸ್ಪತ್ರೆ ಉಚಿತ ಚಿಕಿತ್ಸೆ ನೀಡುವ ಮೂಲಕ ನೆರವಾಗಿದೆ ಎಂದರು.

ಶಿಬಿರದಲ್ಲಿ ಹುಣಸೂರು ಅಪೋಲೊ ಆಸ್ಪತ್ರೆಯ ವ್ಯವಸ್ಥಾಪಕ ಕೇಶವ್, ಸುಮಾ, ಸಂಘದ ಕಾರ್ಯದರ್ಶಿ ನೇರಳಕುಪ್ಪೆ ಮಹದೇವ್, ನಗರ ಕಾರ್ಯದರ್ಶಿ ಶಂಕರ್, ಉಪಾಧ್ಯಕ್ಷ ಚಲುವರಾಜ್, ಖಜಾಂಚಿ ಯೋಗೇಶ್, ಹೆಚ್.ಕೆ.ಕೃಷ್ಣ, ಕೆ.ಕೃಷ್ಣ, ಹನಗೋಡ್ ನಟರಾಜ್ , ಸಂಪತ್, ಯೋಗಾನಂದ್, ಚುಕ್ಕಿ ಮಹದೇವ್, ಜಯರಾಂ, ರಫೀಕ್, ಇದ್ದರು.

RELATED ARTICLES
- Advertisment -
Google search engine

Most Popular