Friday, April 11, 2025
Google search engine

HomeUncategorizedರಾಷ್ಟ್ರೀಯರೈತರೊಂದಿಗೆ ಗದ್ದೆಯಲ್ಲಿ ಉಳುಮೆ ಮಾಡಿ, ನಾಟಿ ಮಾಡಿದ ರಾಹುಲ್ ಗಾಂಧಿ

ರೈತರೊಂದಿಗೆ ಗದ್ದೆಯಲ್ಲಿ ಉಳುಮೆ ಮಾಡಿ, ನಾಟಿ ಮಾಡಿದ ರಾಹುಲ್ ಗಾಂಧಿ

ಸೋಣಿಪತ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಬೆಳಗ್ಗೆ ಹರ್ಯಾಣದ ಸೋಣಿಪತ್ ನ ಮದಿನಾ ಗ್ರಾಮದಲ್ಲಿ ರೈತರೊಂದಿಗೆ ಬೆರೆತು ನಾಟಿ ಮಾಡಿದರು.

ಅವರು ಹಿಮಾಚಲ ಪ್ರದೇಶಕ್ಕೆ ಹೋಗುತ್ತಿದ್ದಾಗ ಭತ್ತದ ಗದ್ದೆಯೊಂದರಲ್ಲಿ ಭತ್ತ ನಾಟಿಯಾಗುತ್ತಿರುವುದನ್ನು ಕಂಡ ಕಾಂಗ್ರೆಸ್‌ ಮುಖಂಡ ರಾಹುಲ್ ಕಾರನ್ನು ನಿಲ್ಲಿಸಿದರು. ಹೊಲಕ್ಕೆ ತೆರಳಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ರೈತರೊಂದಿಗೆ ಸೇರಿ ಭತ್ತ ನಾಟಿ ಮಾಡಿದರು.

ಅಲ್ಲದೆ ರೈತರೊಂದಿಗೆ ಕೃಷಿ ಕಾರ್ಮಿಕರೊಂದಿಗೆ ಮಾತನಾಡುವುದು ಕಂಡು ಬಂತು.

2024ರ ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್, ದೇಶದ ಹಲೆವೆಡೆ ವಿವಿಧ ಸ್ಥರ ಜನರೊಂದಿಗೆ ಬೆರೆಯುತ್ತಿದ್ದಾರೆ.

ಅವರು ಇತ್ತೀಚೆಗೆ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಬೈಕ್ ಮೆಕ್ಯಾನಿಕ್ ಕಾರ್ಯಾಗಾರಕ್ಕೆ ಭೇಟಿ ನೀಡಿದ್ದರು. ವರ್ಕ್‌ ಶಾಪ್‌ ನಲ್ಲಿ ಮೆಕ್ಯಾನಿಕ್‌ ಗಳೊಂದಿಗೆ ಗಾಂಧಿ ಸಂಭಾಷಣೆ ನಡೆಸಿದರು. ಅಲ್ಲದೆ ಮುರಿದ ಮೋಟಾರ್‌ ಸೈಕಲ್‌ ಗಳನ್ನು ಸರಿಪಡಿಸಲು ಪ್ರಯತ್ನಿಸಿದರು.

RELATED ARTICLES
- Advertisment -
Google search engine

Most Popular