ಬೆಂಗಳೂರು: ಆರ್ಸಿಬಿ ಸಂಭ್ರಮಾಚರಣೆ ವೇಳೆ ಅಭಿಮಾನಿಯ ಸಾವಿನ ಪ್ರಕರಣ ರಾಜ್ಯ ಸರ್ಕಾರಕ್ಕೆ ಭಾರಿ ಸಂಕಷ್ಟ ತಂದಿದೆ. ಈ ವಿಷಯವಾಗಿ ಕಾಂಗ್ರೆಸ್ ಹೈಕಮಾಂಡ್ ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಆರೋಗ್ಯ ಇಲಾಖೆ ಈಗ ಹೊಸ ಮಾರ್ಗಸೂಚಿ ಜಾರಿಗೆ ತಯಾರಿ ನಡೆಸುತ್ತಿದೆ.
ಇನ್ನೆಲ್ಲಾ ಕಾರ್ಯಕ್ರಮಗಳಿಗೆ – ವಿಶೇಷವಾಗಿ ಸಾವಿರಾರು ಜನ ಸೇರುವುದಾದರೆ – ಆರೋಗ್ಯ ಇಲಾಖೆಯ ಅನುಮತಿ ಕಡ್ಡಾಯವಾಗಬೇಕು ಎಂಬ ಶಿಫಾರಸ್ಸನ್ನು ಸಚಿವರು ಮುಂದಿಟ್ಟಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ವೈದ್ಯರು, ಸಿಬ್ಬಂದಿ ಹಾಗೂ ಐಸಿಯು ಆ್ಯಂಬುಲೆನ್ಸ್ ವ್ಯವಸ್ಥೆ ಇರಬೇಕು ಎಂದು ಸೂಚನೆ ನೀಡಲು ಚಿಂತನೆ ನಡೆಯುತ್ತಿದೆ.
ಆರ್ಸಿಬಿ ಕಾರ್ಯಕ್ರಮದಲ್ಲಿ ಸುಮಾರು 9 ಲಕ್ಷ ಮಂದಿ ಹಾಜರಾಗಿದ್ದರೂ, ಸಮರ್ಪಕ ವೈದ್ಯಕೀಯ ಸೇವೆ ಇಲ್ಲದ ಕಾರಣ ಹಲವರು ತೊಂದರೆ ಅನುಭವಿಸಿದರು. ಅನೇಕರು ನಡು ರಸ್ತೆಯಲ್ಲಿಯೇ ಪಿಸಿಆರ್ ಪರೀಕ್ಷೆಗೆ ಒಳಪಟ್ಟಿದ್ದು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ಈಗ ಕಾರ್ಯಕ್ರಮಗಳಿಗೆ ಗೈಡ್ಲೈನ್ ರೂಪಿಸಲು ಮುಂದಾಗಿದೆ. ಇನ್ನು ಇಂದು ಪ್ರಕರಣ ಸಂಬಂಧಿತವಾಗಿ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲಿದೆ.