ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಕಾವೇರಿ ನದಿಯಲ್ಲಿ ಪ್ರವಾಹ ಇಳಿಕೆಯಾಗಿದೆ .ಇದರಿಂದಾಗಿ ಜನರಲ್ಲಿ ಪ್ರವಾಹ ಭೀತಿ ಆತಂಕ ದೂರಾಗಿದೆ.
ಕೆ ಆರ್ ಎಸ್ ಡ್ಯಾಮ್ ಗೆ ಒಳ ಹರಿವು ಕಡಿಮೆಯಾಗಿದೆ. ಡ್ಯಾಂ ಹೊರ ಹರಿವಿನ ಪ್ರಮಾಣ 6 ಸಾವಿರ ಕ್ಯೂಸೆಕ್ ಗೆ ಇಳಿಕೆಯಾಗಿದೆ. ಯಥಾ ಸ್ಥಿತಿಗೆ ಬಂದ ನದಿ ನೀರಿನ ಹರಿಯುವಿಕೆ ಪ್ರಮಾಣ. ರಂಗನತಿಟ್ಟು ಪಕ್ಷಿಧಾಮದಲ್ಲಿ ಸ್ಥಗಿತ ಗೊಂಡ ದೋಣಿ ವಿಹಾರ ಪುನರಾರಂಭಗೊಂಡಿದೆ.