ಮೈಸೂರು: ಮೈಸೂರಿನ ವಿದ್ಯಾರಣ್ಯಪುರಂನ ಹೊಸ ಇಟ್ಟಿಗೆ ಗೂಡಿನ ಡಾ|| ಬಿ.ಆರ್. ಅಂಬೇಡ್ಕರ್ ಸಮುದಾಯ ಭವನಕ್ಕೆ ಶಾಸಕ ಶ್ರೀವತ್ಸ, ಮೇಯರ್ ಶಿವಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸಮಿತಿಯ ಸದಸ್ಯರು ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬೆಕ್ಕಬಸವಯ್ಯ, ಕಾರ್ಯದರ್ಶಿ ವೀರರಾಜು, ವೆಂಕಟರಾಜು, ಮುಖಂಡರಾದ ಎನ್. ನಂಜಯ್ಯ, ಸ್ವಾಮಿ, ಕೃಷ್ಣಮೂರ್ತಿ, ಧರ್ಮಲಿಂಗು, ಶಿವಪ್ಪ, ಸೋಮಶೇಖರ್, ಚಂದ್ರಶೇಖರ್, ಮೋಹನ್ ಹಾಜರಿದ್ದರು.