Friday, April 18, 2025
Google search engine

Homeರಾಜ್ಯಸುದ್ದಿಜಾಲನಿವೃತ್ತ ತಹಸೀಲ್ದಾರ್ ವೈ.ಎಂ. ನಂಜಯ್ಯ ನಿಧನ

ನಿವೃತ್ತ ತಹಸೀಲ್ದಾರ್ ವೈ.ಎಂ. ನಂಜಯ್ಯ ನಿಧನ

ಯಳಂದೂರು: ಪಟ್ಟಣದ ಬಳೇಪೇಟೆಯ ನಿವಾಸಿ ನಿವೃತ್ತ ತಹಸೀಲ್ದಾರ್ ವೈ.ಎಂ. ನಂಜಯ್ಯ (೬೩) ಮಂಗಳವಾರ ಹೃದಯಾಘಾತದಿಂದ ತಮ್ಮ ನಿವಾಸದಲ್ಲಿ ಮೃತಪಟ್ಟರು.

ಮೃತರಿಗೆ ಸಹೋದರ ಪಪಂ ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ಶಿಕ್ಷಕ ವೈ.ಎಂ. ಮಲ್ಲಿಕಾರ್ಜುನಸ್ವಾಮಿ, ಪತ್ನಿ ಸೇರಿದಂತೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾನೆ. ಇವರ ಅಂತ್ಯಕ್ರಿಯೆಯು ಪಟ್ಟಣದ ಹೊನ್ನೂರು ರಸ್ತೆಯಲ್ಲಿರುವ ಜಮೀನಿನಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು. ಶಾಸಕ ಎ.ಆರ್. ಕೃಷ್ಣಮೂರ್ತಿ ಸೇರಿದಂತೆ ಅನೇಕ ಗಣ್ಯರು ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

RELATED ARTICLES
- Advertisment -
Google search engine

Most Popular