ಮದ್ದೂರು: ಶ್ರೀ ಗಂಧ ಕೃಷಿ ಮಾಡುವುದರ ಮೂಲಕ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ರಾಜ್ಯ ಶ್ರೀ ಗಂಧ ಬೆಳೆಗಾರರ ಸಂಘದ ಗೌರವಾಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಅಮರ್ ನಾರಾಯಣ್ ಹೇಳಿದರು.
ಪಟ್ಟಣದ ತೋಟಗಾರಿಕೆ ಇಲಾಖೆಯ ನಿಖರ ಬೇಸಾಯ ತರಬೇತಿಯ ಉಪನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಶ್ರೀಗಂಧ ಕೃಷಿ ಜೊತೆಗೆ ಮಿಶ್ರ ಬೆಳೆಯಾಗಿ ತೋಟಗಾರಿಕಾ ಮತ್ತು ಸುಗಂಧ ದ್ರವ್ಯ ಬೆಳೆಗಳ ಕೃಷಿ ಬಗೆಗಿನ 1 ದಿನದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಗಂಧದ ಮರಕ್ಕೆ ಹೆಚ್ಚಿನ ಬೆಲೆಯಿರುವುದು ಎಲ್ಲರಿಗೂ ಗೊತ್ತಿದೆ ಆದರೆ ಹಿಂದೆಯಂತೆ ಅದನ್ನು ಬೆಳೆಯಲು ಇದ್ದ ನಿರ್ಬಂಧಗಳ ಸಡಿಲಿಕೆ ಹಾಗೂ ರೈತರೂ ಕೂಡಾ ಬೆಳೆಯಲು ಇರುವ ಮಾರ್ಗಸೂಚಿಗಳನ್ನು ತಿಳಿಸಲೆಂದೆ ಈ ಅರಿವು ಕಾರ್ಯಗಾರವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಶ್ರೀ ಗಂಧ ಬೆಳೆಯುವ ವಿಧಾನ, ಅದನ್ನು ಮಾರುಕಟ್ಟೆ ಮಾಡಲು ಇರುವ ಸೂಚನೆಗಳನ್ನು ರೈತರು ಅರಿಯಬೇಕು ಅಷ್ಟೇ ಅಲ್ಲದೇ ಶ್ರೀ ಗಂಧದ ಜೊತೆಗೆ ಇತರೆ ಅಲ್ಪ ಕಾಲಿಕ ತೋಟಗಾರಿಕಾ ಬೆಳೆಯನ್ನು ಇದರ ಜೊತೆಯಲ್ಲಿ ಬೆಳೆಯಬಹುದು ಎಂದರು.
ಇವುಗಳ ಜೊತೆಗೆ ಸುಗಂಧ ದ್ರವ್ಯ ಕೃಷಿಯನ್ನು ಮಿಶ್ರ ಬೇಸಾಯ ಮಾಡುವುದರಿಂದ ಮತ್ತಷ್ಟು ಆದಾಯವನ್ನು ಹಂತ ಹಂತ ವಾಗಿ ರೈತರು ಪಡೆಯಬಹುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಶ್ರೀ ಗಂಧ ಬೆಳೆಗಾರರ ಸಂಘದ ಉಪಾಧ್ಯಕ್ಷರಾದ ನಿವೃತ್ತ ಐ ಪಿ ಎಸ್ ಅಧಿಕಾರಿ ಶರಣಪ್ಪ, ತೋಟಗಾರಿಕಾ ಇಲಾಖೆಯ ನಿಖರ ಬೇಸಾಯ ತರಬೇತಿ ಕೇಂದ್ರದ ಉಪ ನಿರ್ದೇಶಕ ರಾಜು, ಸಂಘದ ಮಾದನಾಯಕನಹಳ್ಳಿ ದೇವರಾಜು, ಕಪನಿಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.