ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಪೂರ್ಣಕಾಲಿಕ ವಿದ್ಯಾರ್ಥಿಯಾಗಿದ್ದ ಸತೀಶ್ ಕೆ.ಎಂ ಅವರಿಗೆ ವಿವಿಯು ಪಿಹೆಚ್ಡಿ ಪದವಿ ಘೋಷಿಸಿದೆ.
ವಿಶ್ವವಿದ್ಯಾಲಯದ ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಅಂಶುಮಾಲಿ ಅವರ ಮಾರ್ಗದರ್ಶನದಲ್ಲಿ ‘ಸಿಂಥೆಸಿಸ್ ಕ್ಯಾರಕ್ಟರೈಸೇಷನ್ ಆಫ್ ಆರ್ಗನೋ ಮೆಟಾಲಿಕ್ ಸಿಂಗಲ್ ಮಾಲಿಕ್ಯುಲಾರ್ ಮ್ಯಾಗ್ನೆಟ್ಸ್ ಡಿರೈವ್ಡ್ ಫ್ರಮ್ ಮೆಟಲ್ ಅಸಿಟಲೈಡ್ ಬಿಲ್ಡಿಂಗ್ ಬ್ಲಾಕ್ಸ್’ ಎಂಬ ಮಹಾಪ್ರಬಂಧ ಮಂಡಿಸಿದ್ದಕ್ಕೆ ಪಿಹೆಚ್ಡಿ ಪದವಿಯನ್ನು ಘೋಷಣೆ ಮಾಡಿದೆ ಎಂದು ವಿವಿಯು ಪ್ರಕಟಣೆಯಲ್ಲಿ ತಿಳಿಸಿದೆ.