Saturday, May 31, 2025
Google search engine

Homeಸ್ಥಳೀಯಶಾಲಾ ಪ್ರಾರಂಭೋತ್ಸವ: ಶಾಸಕ ಹರೀಶ್ ಗೌಡ ರವರಿಂದ ಪಠ್ಯಪುಸ್ತಕ ವಿತರಣೆ

ಶಾಲಾ ಪ್ರಾರಂಭೋತ್ಸವ: ಶಾಸಕ ಹರೀಶ್ ಗೌಡ ರವರಿಂದ ಪಠ್ಯಪುಸ್ತಕ ವಿತರಣೆ

ಮೈಸೂರು: ಬೇಸಿಗೆ ರಜೆ ಕಳೆದು ಇಂದಿನಿಂದ ಸರ್ಕಾರಿ ಶಾಲೆಗಳು ಪ್ರಾರಂಭವಾಗಿದ್ದು ಮೊದಲ ದಿನವೇ ಹರ್ಷದಿಂದ ಶಾಲೆಯತ್ತ ಹೆಜ್ಜೆ ಹಾಕಿದ ವಿದ್ಯಾರ್ಥಿಗಳಿಗೆ ಶಾಸಕ ಹರೀಶ್ ಗೌಡರವರು ಹೂವು ಸಿಹಿ ಹಾಗೂ ಪಠ್ಯಪುಸ್ತಕವನ್ನು ನೀಡಿ ಮಕ್ಕಳನ್ನು ಸ್ವಾಗತಿಸಿದರು.

ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಜೂನಿಯರ್ ಮಹಾರಾಣಿ ಶಾಲೆಯಲ್ಲಿ 2025-2026 ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ಹೂವು ಸಿಹಿ ಹಾಗೂ ಪಠ್ಯಪುಸ್ತಕವನ್ನು ನೀಡಿ ಮಕ್ಕಳನ್ನು ಸ್ವಾಗತಿಸಿ ಮಾತನಾಡಿದ ಅವರು ಜ್ಞಾನದ ಬೆಳಕು ಹೆಚ್ಚಾಗಲಿ
ಶಿಕ್ಷಣವೇ ಶಕ್ತಿ, ಶಿಕ್ಷಣ ಕಲಿತ ವ್ಯಕ್ತಿ ತನ್ನ ಜೀವನವನ್ನು ಉತ್ತಮವಾಗಿ ನಿರ್ವಹಿಸಿ, ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವರು, ಶಾಲೆಗಳು ಶಿಕ್ಷಣ ನೀಡುವ ಕೇಂದ್ರಗಳಾಗಿದ್ದು, ಅರ್ಹ ವಯಸ್ಸಿನ ಮಕ್ಕಳನ್ನು ಶಾಲೆಗೆ ಸೇರಿಸಿ, ನಿಯಮಿತವಾಗಿ ಶಾಲೆಗೆ ಕಳುಹಿಸಬೇಕು ಎಂದು ಹೇಳಿದರು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಶೊ-ಸಾಕ್ಸು, ಬಿಸಿಯೂಟ ನೀಡಲಾಗುತ್ತಿದ್ದು ಇದರ ಪ್ರಯೋಜನ ಪಡೆಯಬೇಕೆಂದರು.

ಜೂನಿಯರ ಮಹಾರಾಣಿ ಕಾಲೇಜು ಪ್ರಾಶುಪಲರಾದ ಸೋಮಣ್ಣ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಮಹಾದೇವ್, ಸದಸ್ಯರುಗಳಾದ,ಚೆಲುವರಾಜ್, ನವೀನ್, ರವಿಚಂದ್ರ,ಉಪ ಪ್ರಶುಪಲರಾದ ಚೆಲುವಂಬ,
ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ದೇವರಾಜ ಬ್ಲಾಕ್ ಅಧ್ಯಕ್ಷರಾದ,ರಮೇಶ್ ರಾಯಪ್ಪ, ಸಂದೀಪ್, ಮಾದೇವಣ್ಣ, ಚೆಲುವ, ಕುಮಾರಣ್ಣ, ಹರೀಶ್ ಗೌಡ ಸಂತೋಷ್, ನಿತಿನ್, ನವೀನ್, ಶ್ರೀನಿವಾಸ್ ,ಹರ್ಷ, ನಂಜುಂಡಿ, ಎಸ್ ಎನ್ ರಾಜೇಶ್, ಮಂಜುನಾಥ್, ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular