ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಸತ್ ಚುನಾವಣೆ ನಡೆಸಲಾಯಿತು.
ಸಾಂಪ್ರದಾಯಿಕ ಬ್ಯಾಲೆಟ್ ಚುನಾವಣೆ ಮಾಡದೆ ಎಲೆಕ್ಟ್ರಾನಿಕ್ ಮತಯಂತ್ರ ರೀತಿಯಲ್ಲಿ ಮೊಬೈಲ್ ಬಳಸಿ ಎಲೆಕ್ಟ್ರಾನಿಕ್ ಚುನಾವಣೆ ನಡೆಸಿದ್ದು ವಿಶೇಷವಾಗಿತ್ತು. ಬ್ಯಾಲೆಟ್ ಬದಲು ಮೊಬೈಲ್ ಆಪ್ ನಲ್ಲಿ ಚುನಾವಣೆ ನಡೆಸಿ ಮದ್ಯಾಹ್ನ 3 ಗಂಟೆ ಒಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿ ವಿಜೇತರನ್ನು ಘೋಷಿಸಿ ಸಂಜೆಯೇ ಶಾಲಾ ಕ್ಯಾಬಿನೆಟ್ ರಚಿಸಲಾಯಿತು.ಮಕ್ಕಳಿಗೆ ಚುನಾವಣೆ ಪ್ರಕ್ರಿಯೆ ಅಲ್ಲದೇ ಎಲೆಕ್ಟ್ರಾನಿಕ್ ಮತಚಲಾವಣೆ ಮಾಡಿದ್ದು, ಹೊಸತನ ನೀಡಿತು.
ಪ್ರಸಕ್ತ ಶೈಕ್ಷಣಿಕ ಸಾಲಿನ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಕುತೂಹಲ ಹಾಗೂ ಲವಲವಿಕೆಯಿಂದ ಭಾಗವಹಿಸಿದ್ದರು. ಈ ವೇಳೆ ಪ್ರಾಂಶುಪಾಲರಾದ ಮಹದೇವಪ್ರಸಾದ್ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.