Thursday, June 19, 2025
Google search engine

Homeಅಪರಾಧತಾಯಿಗೆ ಕರೆಮಾಡಿ ‘ನನಗೆ ಹುಷಾರಿಲ್ಲ’ ಎಂದ ಮಗ: ಬಳಿಕ ಆತ್ಮಹತ್ಯೆ

ತಾಯಿಗೆ ಕರೆಮಾಡಿ ‘ನನಗೆ ಹುಷಾರಿಲ್ಲ’ ಎಂದ ಮಗ: ಬಳಿಕ ಆತ್ಮಹತ್ಯೆ

ಮಡಿಕೇರಿ: ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ಕಾಲೋನಿಗೆ ಸೇರಿದ ಗಗನ್ (21) ಎಂಬ ಯುವಕ ಬೆಂಗಳೂರಿನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ದುರ್ಘಟನೆ ತಾಯಿ ಬೆಂಗಳೂರಿಗೆ ತಲುಪುವ ಕೆಲವೇ ಕ್ಷಣಗಳ ಹಿಂದೆ ನಡೆದಿದ್ದು, ಕುಟುಂಬಸ್ಥರಲ್ಲಿ ಅಳಲು ಮುಗಿಲು ಮುಟ್ಟಿದೆ.

ಗಗನ್, ಕೊಡಗಿನ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಸದಸ್ಯೆ ಚಂದ್ರಾವತಿ ಹಾಗೂ ಸುರೇಶ್ ದಂಪತಿಯ ಮಗ. ಅವರು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಸಮಯ ಲಭ್ಯವಿದ್ದಾಗ ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಮಾಡುತ್ತಿದ್ದರು. ತೀವ್ರ ಮಾನಸಿಕ ಒತ್ತಡದಲ್ಲಿದ್ದ ಶಂಕೆ ವ್ಯಕ್ತವಾಗುತ್ತಿರುವ ಈ ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಗಗನ್ ತನ್ನ ತಾಯಿ ಚಂದ್ರಾವತಿಗೆ ಕಳೆದ ಎರಡು ದಿವಸಗಳಿಂದ ತಾಯಿಗೆ ಕರೆ ಮಾಡಿ ನನಗೆ ಹುಷಾರಿಲ್ಲ, ಬನ್ನಿ ಎಂದು ಪದೇ ಪದೇ ಕರೆದಿದ್ದ. ಹೀಗಾಗಿ ಚಂದ್ರಾವತಿರವರು ನೆನ್ನೆ ರಾತ್ರಿಯೇ ಬೆಂಗಳೂರಿಗೆ ಬಸ್‌ ಹತ್ತಿದ್ದರು. ತಮ್ಮ ಆಗಮನದ ವಿಚಾರವನ್ನು ಕೂಡ ಗಗನ್‌ಗೆ ತಿಳಿಸಿದ್ದಾರೆ. ಆದರೆ ದುರದೃಷ್ಟವಶಾತ್ ಅವರು ಬೆಂಗಳೂರಿಗೆ ತಲುಪುವ ಮುನ್ನವೇ ಗಗನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಘಟನೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಆತ್ಮಹತ್ಯೆಗೆ ಕಾರಣವಾದ ಯಾವುದೇ ಸುಳಿವು ಅಥವಾ ಪತ್ರ ಇನ್ನೂ ಲಭಿಸಿಲ್ಲ.

RELATED ARTICLES
- Advertisment -
Google search engine

Most Popular