ವರದಿ: ಎಡತೊರೆ ಮಹೇಶ್
ಎಚ್.ಡಿ. ಕೋಟೆ: ಎಚ್. ಡಿ. ಕೋಟೆ ತಾಲೋಕಿನ ಅಣ್ಣೂರು ಗ್ರಾಮ ಪಂಚಾಯ್ತಿ ವತಿಯಿಂದ ಪಂಚಾಯ್ತಿ ಮಟ್ಟದ ಕೆಡಿಪಿ ಸಭೆ ಮತ್ತು ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಡಾ, ಕೃಷ್ಣರಾಜ್ ಮಾತಾನಾಡಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೆಡಿಪಿ ಸಭೆಯನ್ನ ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರವಾಗಿದೆ, ಎಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಸಮನ್ವಯತೆ ಇದೆಯೋ ಅಲ್ಲಿ ನೂರಕ್ಕೆ ನೂರರಷ್ಟು ಅಭಿವೃದ್ಧಿ ಆಗುತ್ತದೆ ಎಂಬುದಕ್ಕೆ ಅಣ್ಣೂರು ಗ್ರಾಮ ಪಂಚಾಯ್ತಿ ಜಿಲ್ಲೆಯಲ್ಲಿಯೇ ಮಾದರಿಯಾಗಿದೆ ಎಂದು ಬಣ್ಣಿಸಿದರು. ಈ ಪಂಚಾಯ್ತಿಯಲ್ಲಿ ನಡೆದಿರುವ ನರೇಗಾ, ವಸತಿ, ಸ್ವಚ್ಚತಾ ಮತ್ತು ಮತ್ತಿತರ ಕೆಲಸಗಳಲ್ಲಿ ನೂರರಷ್ಟು ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಪ್ರಶಂಸೆ ಮಾಡಿದರು.

ಪ್ರಾಸ್ತಾವಿಕವಾಗಿ ಪಂಚಾಯ್ತಿ ಉಪಾಧ್ಯಕ್ಷ ಎಡತೊರೆ ಮಹೇಶ್ ಮಾತಾನಾಡಿ ಸರ್ಕಾರದ ಆದೇಶವಿದ್ದರು ಪಂಚಾಯ್ತಿಗಳಲ್ಲಿ ಕೆಡಿಪಿ ಸಭೆಗಳನ್ನು ಮಾಡುತ್ತಿಲ್ಲ ಯಾಕೆಂದರೆ ಅಧಿಕಾರಿಗಳಿಗೆ ಮಾಹಿತಿ ಕೊರತೆ ಇದೆ ಆದರೆ ನಾವು ವಿದ್ಯಾವಂತರಾಗಿ ಪಂಚಾಯ್ತಿ ಕಾಯ್ದೆಯನ್ನ ತಿಳಿದುಕೊಂಡು ಕಾಯ್ದೆಯನ್ವಯ ಕೆಲಸ ಮಾಡಬೇಕಾಗಿದೆ, ಈ ಹಿನ್ನೆಲೆಯಲ್ಲಿ ನಮ್ಮ ಪಂಚಾಯತಿ ಸದಸ್ಯರೆಲ್ಲ ಸಭೆ ಸೇರಿ ತಿರ್ಮಾನಿಸಿ ಇಂದು ತಾಲೋಕು ಮಟ್ಟದ ಅಧಿಕಾರಿಗಳನ್ನ ಕರೆದು ಪಂಚಾಯ್ತಿ ಮಟ್ಟದ ಕೆಡಿಪಿ ಸಭೆಯನ್ನು ಮಾಡುತ್ತಿದ್ದೆವೆ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್, ಸದಸ್ಯ ಸ್ವಾಮಿ ಸಭೆಯನ್ನು ಕುರಿತು ಮಾತಾನಾಡಿದರು.

ಈ ಕೆಡಿಪಿ ಸಭೆಯನ್ನು ಅಭಿವೃದ್ಧಿ ಅಧಿಕಾರಿ ಸಂತೋಷ ನಾಗ್ ನಿರ್ವಹಿಸಿ ಕಾರ್ಯದರ್ಶಿ ಮೋಹನ್ ಸ್ವಾಗತಿಸಿದರು.
ಪಂಚಾಯ್ತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷ ಎಡತೊರೆ ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್,ಮಹೇಶ್, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಡಾ. ಕೃಷ್ಣರಾಜ್, ಇಒ ಧರಣೇಶ್, ವೈದ್ಯಾಧಿಕಾರಿ ಅಶಿಷ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಸಂತೋಷ ನಾಗ್, ಕಾರ್ಯದರ್ಶಿ ಮೋಹನ್, ಸದಸ್ಯರಾದ ಸ್ವಾಮಿ, ಜಯಮ್ಮ, ಸರಸ್ವತಿ, ಸಿದ್ದಮ್ಮ, ರಾಜೇಶ್, ಶಿವಮ್ಮ, ಶಶಿಕುಮಾರ್, ಜಯಲಕ್ಷ್ಮಿ, ಸುಮಾ, ಚಿಕ್ಕಮ್ಮ, ರಾಜು, ಗೋವಿಂದೇಗೌಡ, ಸುರೇಶ ಹೊಸಳ್ಳಿ, ಮಮತಾ, ತಾರಾ, ಸೂರ್ಯ ಕುಮಾರ್, ದಾಸು, ಗಂಗರಾಜ್, ಸಮಯ, ಧರ್ಮ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಲಾ ಮುಖ್ಯಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು,ಅಧಿಕಾರಿ ವರ್ಗದವರು ಹಾಜರಿದ್ದರು.