ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹಳಿಯೂರು ಗ್ರಾಮದಲ್ಲಿ 6 ವರ್ಷಗಳ ನಂತರ ನಡೆದ ಶ್ರೀದೊಡ್ಡಮ್ಮ ತಾಯಿ ರಥೋತ್ಸವ ಶುಕ್ರವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಾರಿ ವಿಜೃಂಭಣೆಯಿಂದ ನಡೆಯಿತು.
ರಾತ್ರಿ 7 ಗಂಟೆಯ ಸಮಯದಲ್ಲಿ ದೊಡ್ಡಮ್ಮ ತಾಯಿ ದೇವರ ಅರ್ಚಕ ಪ್ರಮೋದ್ ಕುಮಾರ ಅವರ ಚಿಕ್ಕಕೊಪ್ಪಲು ಗ್ರಾಮದ ನಿವಾಸದಿಂದ ದೇವರ ಉತ್ಸವ ಮೂರ್ತಿಯನ್ನು ಕಳಸ ಹೊತ್ತು ಮೆರವಣಿಗೆ ಮೂಲಕ ಹಳಿಯೂರು ಗ್ರಾಮಕ್ಕೆ ತರಲಾಯಿತು.
ನಂತರ ಗ್ರಾಮದ ಮಾರಮ್ಮ ತಾಯಿ ದೇವಾಲಯದಲ್ಲಿ ದೊಡ್ಡಮ್ಮ ತಾಯಿ ದೇವರನ್ನು ಕೂರಿಸಿದಾಗ ನೆರದಿದ್ದ ಭಕ್ತರು ಮತ್ತು ಗ್ರಾಮಸ್ಥರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಗ್ರಾಮದ ಬೋರೆಗೌಡರ ಕುಟುಂಬಸ್ಥರು ದೊಡ್ಡಮ್ಮ ತಾಯಿ ದೇವರಿಗೆ ದೂಳ್ ಮರಿಯನ್ನ ಅರ್ಪಿಸಿದ ಬಳಿಕ ದೇವರನ್ನು ಅಲಂಕಾರ ಗೊಂಡಿದ್ದ ರಥಕ್ಕೆ ಕೂರಿಸಿದಾಗ ಭಕ್ತರು ಮತ್ತು ಗ್ರಾಮಸ್ಥರು ದೇವರಿಗೆ ಜಯಘೋಷ ಕೂಗಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ರಾತ್ರಿ 9.30 ರ ಸಮಯದಲ್ಲಿ ರಥವನ್ನು ಹಳಿಯೂರು ಬಡಾವಣೆಯಲ್ಲಿರುವ ದೊಡ್ಡಮ್ಮ ತಾಯಿ ದೇವಾಲಯದರಿಗೂ ಎಳೆಯುವವರಿಗೂ ಕುರಿ-ಆಡು-ಕೋಳಿಗಳನ್ನು ಬಲಿ ಕೊಟ್ಟು ರಥ ಎಳೆದು ಉತ್ತಮ ಮಳೆ-ಬೆಳೆಗಾಗಿ – ಕುಟುಂಬದ ಒಳತಿಗಾಗಿ ಪ್ರಾರ್ಥಿಸಿದರು.
ಬಳಿಕ ದೇವಾಲಯದ ಬಳಿ ಸೂಳೆಕೋಟೆ ವಂಶಸ್ಥರು ಶನಿವಾರ ಬೆಳಿಗ್ಗೆ 3ರ ಸಮಯದಲ್ಲಿ ಕೊನೆಯದಾಗಿ ಹರಿಕೆ ಆಡು ಒಪ್ಪಿಸಿದ ಬಳಿಕ ದೊಡ್ಡಮ್ಮ ತಾಯಿ ದೇವರನ್ನು ದೇವಾಲಯಕ್ಕೆ ತಂದು ಕೂರಿಸಿ ಅನಂತರ ರಥವನ್ನು ಗ್ರಾಮಕ್ಕೆ ಮತ್ತೆ ಎಳೆದು ತರಲಾಯಿತು.
ರಥೋತ್ಸವದಲ್ಲಿ ಉದ್ಯಮಿ ಎಚ್.ಕೆ.ಮಧುಚಂದ್ರ, ಹಳಿಯೂರು ಗ್ರಾ.ಪಂ.ಅಧ್ಯಕ್ಷೆ ರೇಖಾಜಗದೀಶ್, ಮಾಜಿ ಅಧ್ಯಕ್ಷರಾದ ಎಚ್.ಅರ್.ಮಹೇಶ್, ರಾಜೇಗೌಡ, ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ಮಲ್ಲೇಶಾಚಾರಿ, ಮಾಜಿ ಸದಸ್ಯರಾದ ರಾಜಶೇಖರ್, ಜ್ಯೋತಿನವೀನ್, ಮುಖಂಡರಾದ ಲತಾಪ್ರಭಾಕರ್, ಬೆಟ್ಟಣ್ಣನ ರಾಮೇಗೌಡ, ಪೋಲಿಸ್ ಮಧುಸೂಧನ್, ಶಂಕರದೇವ್, ಜೈಮಾರುತಿ, ಗ್ಯಾರಂಟಿ ಗೋಪಾಲ್, ರವೀಶ, ಅಂಗಡಿಗೋಪಿ, ಉಮೇಶ,ಸುಧಾಕರ, ಶಂಬುದೇವ್, ಗೋವಿಂದೇಗೌಡ, ಎಚ್.ಕೆ.ಮಂಜುನಾಥ್, ನಿವೃತ್ತ ಬಿಇಓ ಕರಿಗೌಡ, ಮೈಕ್ ಕೃಷ್ಣ,ಪುನೀತ್ ಗೌಡ, ಡೈರಿ ಹರೀಶ್, ಡೈರಿ ಸುಭಾಶ್,.ಎಚ್.ಎಚ್. ಮಾರುತಿ, ಅಚೆಹಟ್ಟಿ ದಿನೇಶ್,ಕೋಳಿ ಮಹದೇವ್, ಸೊಸೈಟಿ ರಂಜು, ಶ್ಯಾಮಸುಂದರ್, ಎಚ್.ಎಸ್.ರಾಘವ, ಹಾವುಮರಿಹರೀಶ್, ಭೂಸಪ್ಪನಕುಮಾರ, ಟೆಕ್ನಿಕ್ ಮಹದೇವ್, ಡಾ.ಅರುಣ್, ಡಾಮಂಜುನಾಥ್, ಶಿಕ್ಷಕರಾದ ಕೃಷ್ಣಮೂರ್ತಿ,ಕುಮಾರ್, ದೇವೆಂದ್ರ, ಗ್ಯಾರಂಟಿಕುಮಾರ್, ಸ್ನೇಹಜೀವಿ ಹರೀಶ್, ಅಲ್ಲದೇ ಹಳಿಯೂರು, ಜವರೇಗೌಡನಕೊಪ್ಪಲು, ಹಳಿಯೂರು ಬಡಾವಣೆ, ಸಾಲೇಕೊಪ್ಪಲು ಸೇರಿದಂತೆ ಇನ್ನಿತರ ಗ್ರಾಮಗಳ ಸಾವಿರಾರು ಮಂದಿ ಹಾಜರಿದ್ದರು.