ವಿಜಯಪುರ: ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ತುಂಬಿ ತುಳುಕುತ್ತಿದ್ದು ಸದ್ಯ ಐಸಿಯುನಲ್ಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಬಿಜೆಪಿಯ ಹೋರಾಟಕ್ಕೆ ಜನ ಬೆಂಬಲಿಸದೆ ಹಿನ್ನಡೆ ಅನುಭವಿಸುತ್ತಿದ್ದಾರೆ. ಇದರ ಮೂಲ ಕಾರಣ ರಾಜ್ಯದ ನಾಯಕತ್ವದ ವೈಫಲ್ಯ. ಜೆಡಿಎಸ್ ಮಿತ್ರಪಕ್ಷವಾದರೂ ಸಮನ್ವಯ ಇಲ್ಲ. ಅಮಿತ್ ಶಾ ಅವರು ಈ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು,” ಎಂದರು.
ಯಡ್ಡಿಯೂರಪ್ಪನ ಅಸ್ತಿತ್ವ ಬಿಜೆಪಿ ಪಕ್ಷದಲ್ಲಿ ಕ್ಷೀಣವಾಗುತ್ತಿರುವುದನ್ನು ಉಲ್ಲೇಖಿಸಿದ ಅವರು, “ಯಡ್ಡಿಯೂರಪ್ಪ ಕುಟುಂಬವನ್ನು ಪಕ್ಷದಿಂದ ದೂರ ಇಡಬೇಕು. ನಿಜವಾದ ಕಾರ್ಯಕರ್ತರ ಮೇಲೆ ಕೇಸ್ ಹಾಕುವ ರಾಜಕೀಯ ಎದ್ದುಬರುತ್ತಿದೆ. ಕಾಂಗ್ರೆಸ್ ನಾಯಕರೊಂದಿಗೆ BJP ನಾಯಕರು ಆತ್ಮೀಯತೆ ಪ್ರದರ್ಶಿಸುತ್ತಿದ್ದಾರೆ. ಹಾಗಾದರೆ ಕಾಂಗ್ರೆಸ್ಗೂ ಸೇರಿಕೊಳ್ಳಲಿ,” ಎಂದು ಕಿಡಿಕಾರಿದರು.
ಅಲ್ಪಸಂಖ್ಯಾತರಿಗೆ ವಸತಿ ಹಂಚಿಕೆಯಲ್ಲಿ 5% ಏರಿಕೆ ವಿಚಾರವಾಗಿ ಮಾತನಾಡಿ ಅವರು, “ಜೈನ್, ಸಿಖ್, ಕ್ರೈಸ್ತರಿಗೆ 10%, ಆದರೆ ಮುಸ್ಲಿಂರಿಗೆ 80% ವಸತಿ ಮೀಸಲಾತಿ ನೀಡುತ್ತಾರೆ. ಈ ರೀತಿಯ ನೀತಿ ಹಿಂದೂಗಳ ನಂಬಿಕೆಗೆ ಧಕ್ಕೆ ತರುತ್ತದೆ,” ಎಂದರು.
“ಸಿದ್ದರಾಮಯ್ಯ ಮತ್ತು ಡಿಕೆಶಿ ಮುಸ್ಲಿಂ ಧೃಡೀಕರಣದ ಮೂಲಕ ಕರ್ನಾಟಕವನ್ನು ಮತ್ತೊಂದು ಕೇರಳ ಅಥವಾ ಪಶ್ಚಿಮ ಬಂಗಾಳದತ್ತ ಕೊಂಡೊಯ್ಯುತ್ತಿದ್ದಾರೆ,” ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.