ಮಂಗಳೂರು : 23 ವರ್ಷದ ವೈಶಾಲಿ ಮನೆಯಲ್ಲಿ ಎಲ್ಲರಿಗೂ ಮುದ್ದು ಮಗಳು. ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕು ಎನ್ನುವ ಆಸೆಗೆ ತಕ್ಕಂತೆ ಪೋಷಕರು ಆಕೆಯನ್ನು ಕ್ರಿಮಿನಾಲಜಿಯಲ್ಲಿ ಡಿಗ್ರಿ ಓದಿಸುತ್ತಿದ್ದರು. ಆದರೆ ಓದಿ ಕೆಲಸ ಹಿಡಿಯಬೇಕಾದ ಮಗಳು ಅನ್ಯಕೋಮಿಯ ಯುವಕನೊಂದಿಗೆ ಪರಾರಿಯಾಗಿದ್ದಾಳೆ. ಇತ್ತ ಪೋಷಕರು ಮಗಳೇ ವಾಪಾಸ್ ಮನೆಗೆ ಬಾ ಅಂತಾ ಕಣ್ಣೀರಿಟ್ಟಿದ್ದಾರೆ.
ವೈಶಾಲಿ ಮಂಗಳೂರಿನ ಸುರತ್ಕಲ್ ಬಳಿಯ ಮುಕ್ಕಾದ ಕಾಲೇಜ್ ಒಂದರಲ್ಲಿ ಓದುತ್ತಿರುವ ಕ್ರಿಮಿನಾಲಜಿ ಪದವಿ ವಿದ್ಯಾರ್ಥಿನಿ. ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯವರು. ಇನ್ನು ಈಕೆಯನ್ನು ಮದುವೆ ಮಾಡಿಕೊಂಡಿರುವನ ಹೆಸರು ಮೊಹಮ್ಮದ್ ವಿದ್ಲಾಜ್ ಪಿ.ಎಚ್. ಈತ ಕೇರಳದ ವಯನಾಡಿನವನು. ಈತ ಸುರತ್ಕಲ್ನ ಜ್ಯುವೆಲ್ಲರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇವರಿಬ್ಬರು ಜ.31ರಂದು ವಯನಾಡಿನ ರಿಜಿಸ್ಟರ್ ಕಚೇರಿಯಲ್ಲಿ ಮದುವೆ ಆಗಿರುವ ವಿಚಾರ ಸಾಮಾಜಿಕ ಜಾಲತಾಣದ ಮೂಲಕ ವೈಶಾಲಿ ಮನೆಯವರಿಗೆ ಗೊತ್ತಾಗಿದೆ.
ರಿಜಿಸ್ಟರ್ ಮ್ಯಾರೇಜ್ ವಿಚಾರ ತನ್ನ ಪೋಷಕರಿಗೆ ಗೊತ್ತಾಗಿರುವುದು ವೈಶಾಲಿಗೆ ಗೊತ್ತಾಗುತ್ತಿದ್ದಂತೆ ಫೆಬ್ರವರಿ 9 ರಂದು ತಾನು ವಾಸವಾಗಿದ್ದ ಸುರತ್ಕಲ್ ಪಿಜಿಯಿಂದ ಪರಾರಿಯಾಗಿದ್ದಾಳೆ. ಇನ್ನು ವಿಚಾರ ತಿಳಿದ ತಕ್ಷಣ ಆತನ ತಂದೆ ವಿಶ್ವನಾಥ್ ವಿದೇಶದಿಂದ ದೌಡಾಯಿಸಿದ್ದಾರೆ. ಪೋಷಕರು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ. ಮಗಳು ಲವ್ ಮಾಡುವವಳಂತವಳಲ್ಲ. ಆಕೆಯ ಬ್ರೈನ್ ವಾಶ್ ಮಾಡಲಾಗಿದೆ. ಆಕೆಗೆ ಬ್ಲಾಕ್ ಮೇಲ್ ಮಾಡಿ, ಬೆದರಿಸಿ ಕರೆದುಕೊಂಡು ಹೋಗಾಲಾಗಿದೆ. ಮುಸ್ಲಿಮರು ಷಡ್ಯಂತ್ರ ಮಾಡಿದ್ದಾರೆ ಅಂತಾ ಪೋಷಕರು ಆರೋಪ ಮಾಡಿದ್ದಾರೆ

ಇನ್ನು ವಯನಾಡು ಪೊಲೀಸ್ ಠಾಣೆಯಲ್ಲಿ ಇವರಿಬ್ಬರು ಇರುವುದು ಗೊತ್ತಾಗಿದೆ. ವಿಶ್ವನಾಥ್ ಮತ್ತು ಲತಾ ದಂಪತಿ ವಯನಾಡು ಠಾಣೆಗೆ ಹೋಗಿ ತಮ್ಮ ಮಗಳನ್ನು ಭೇಟಿಯಾಗಿದ್ದಾರೆ. ಮಗಳು ‘ನಾನು ನಿಮ್ಮ ಜೊತೆ ಬರುತ್ತೇನೆ’ ಅಂತಾ ಹೇಳಿದ್ದಳಂತೆ. ಅದೇ ರೀತಿ ಮುಚ್ಚಳಿಕೆ ಬರೆದುಕೊಟ್ಟಳಂತೆ. ಆದರೆ ವಯನಾಡು ಪೊಲೀಸರು ಮಗಳ ಜೊತೆ ಮಾತನಾಡಲು ಕೇವಲ 5 ನಿಮಿಷ ಕಾಲಾವಕಾಶ ನೀಡಿದ್ದಾರೆ. ಆ ಹುಡುಗನಿಗೆ ಹೆಚ್ಚು ಸಮಯ ನೀಡಿದ್ದಾರೆ. ಪೊಲೀಸರು ಕೂಡ ಆ ಹುಡುಗನ ಪರವಹಿಸಿದರು. ಹೀಗಾಗಿ ಬರೆದುಕೊಟ್ಟ ಮುಚ್ಚಳಿಕೆಯನ್ನು ಹರಿದು ಮತ್ತೆ ಬೇರೆ ಬರೆದುಕೊಟ್ಟಿದ್ದಾಳೆ ಅಂತಾ ಪೋಷಕರು ಕಣ್ಣೀರಿಟ್ಟರು. ಇನ್ನು ಮಗಳೇ ಎಲ್ಲಿದರೂ ಬಾ ಅಂತಾ ತಾಯಿ ಲತಾ ಅಂಗಲಾಚಿ ಬೇಡಿಕೊಂಡರು.
ಕೇರಳ ಪೊಲೀಸರು ಹುಡುಗನ ಕಡೆ ಶ್ಯಾಮೀಲಾಗಿದ್ದಾರೆ. ನೀವು ನಮಗೆ ನ್ಯಾಯ ದೊರಕಿಸಿಕೊಡಿ ಅಂತಾ ಪೋಷಕರು ಸುರತ್ಕಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರೀತಿಸಿದವನ ಜೊತೆ ಹೋಗುತ್ತಾಳಾ ಅಥವಾ ಪೋಷಕರ ಪ್ರೀತಿಗೆ ವೈಶಾಲಿ ಕರಗುತ್ತಾಳಾ ಕಾದುನೋಡಬೇಕಿದೆ.



