Monday, April 21, 2025
Google search engine

Homeರಾಜ್ಯಸತತ ಪರಿಶ್ರಮದಿಂದ ಯಶಸ್ಸುಗಳಿಸಲು ಸಾಧ್ಯ: ಸಿ ಟಿ ಗುರುದತ್

ಸತತ ಪರಿಶ್ರಮದಿಂದ ಯಶಸ್ಸುಗಳಿಸಲು ಸಾಧ್ಯ: ಸಿ ಟಿ ಗುರುದತ್

ವರದಿ: ಚಪ್ಪರದಹಳ್ಳಿ ವಿನಯ್ ಕುಮಾರ್

ಬೆಟ್ಟದಪುರ: ಡಿಟಿಎಂಎನ್ ವಿದ್ಯಾ ಸಂಸ್ಥೆಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  ಸತತ 19ನೇ ವರ್ಷದಿಂದ  ಶೇಕಡ 100ರಷ್ಟು ಫಲಿತಾಂಶ ಪಡೆದಿದ್ದು, ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಸಂಸ್ಥೆಯ ನಿರ್ದೇಶಕ ಸಿ ಟಿ ಗುರುದತ್ ತಿಳಿಸಿದರು.

 ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಡಿಟಿಎಂಎನ್ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಣಶ್ರೀ ಎಚ್ಎ ಎನ್ನುವ ವಿದ್ಯಾರ್ಥಿನಿ 625ಕ್ಕೆ 608 ಅಂಕಗಳನ್ನು ಪಡೆಯುವ ಮೂಲಕ ಪಿರಿಯಾಪಟ್ಟಣ  ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಸುಮಾರು 14 ವಿದ್ಯಾರ್ಥಿಗಳು ಶೇಕಡ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದು ಸಂಸ್ಥೆಯ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ ಎಂದರು. ದ್ವಿತೀಯ ಪಿಯುಸಿಯಲ್ಲಿ ಸ್ವಾತಿ ಮತ್ತು ಸ್ಪಂದನ ಜೆ ಗೌಡ ರವರು 600 ಕ್ಕೆ 582 ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ, ವರ್ಷ ಎನ್ 570 ಅಂಕವನ್ನು ಪಡೆದಿರುತ್ತಾರೆ ಎಂದರು.

ಸತತ ಪರಿಶ್ರಮದಿಂದ ಯಶಸ್ಸುಗಳಿಸಲು ಸಾಧ್ಯ, ಈ ಸಾಧನೆಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರ ಮತ್ತು ಪೋಷಕರ ಪಾತ್ರಮಹತ್ವದ್ದಾಗಿದೆ ಎಂದರು.

ಅಲ್ಲದೆ ನಮ್ಮ ವಿದ್ಯಾ ಸಂಸ್ಥೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುತಿದ್ದು,ಇದರಿಂದ ವಿದ್ಯಾರ್ಥಿಯ ಮುಂದಿನ ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗುತ್ತವೆ ಎಂದರು.

 ಈ ಸಂದರ್ಭದಲ್ಲಿ   ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್, ಖಜಾಂಚಿ ಪಿ.ರವಿ, ಆಡಳಿತ ಅಧಿಕಾರಿ ನಟರಾಜ್ ಜೆ ಸಿ, ನಿರ್ದೇಶಕರಾದ ವಿಜಯ್ ಕುಮಾರ್,ಸುಂದರೇಶ್, ಪ್ರಾಂಶುಪಾಲ ಸತೀಶ್, ಮುಖ್ಯ ಶಿಕ್ಷಕರಾದ ಮುರಳಿ ಕೃಷ್ಣ, ಜಯಂತಿ ಸೇರಿದಂತೆ ಶಿಕ್ಷಕರು,ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular