Friday, April 18, 2025
Google search engine

Homeರಾಜ್ಯಸೌಮ್ಯಕೇಶವ ದೇಗುಲದ ಸುತ್ತಮುತ್ತ ಅಧಿಕಾರಿಗಳಿಂದ ಸರ್ವೇ: ಸ್ಥಳೀಯ ನಿವಾಸಿಗಳಲ್ಲಿ ಆತಂಕ

ಸೌಮ್ಯಕೇಶವ ದೇಗುಲದ ಸುತ್ತಮುತ್ತ ಅಧಿಕಾರಿಗಳಿಂದ ಸರ್ವೇ: ಸ್ಥಳೀಯ ನಿವಾಸಿಗಳಲ್ಲಿ ಆತಂಕ

ಮಂಡ್ಯ: ಸೌಮ್ಯಕೇಶವ ದೇಗುಲದ ಸುತ್ತಮುತ್ತ ಸರ್ವೇಗೆ ಹೈ ಕೋರ್ಟ್ ಆದೇಶ ನೀಡಿರುವ ಹಿನ್ನಲೆ ನಾಗಮಂಗಲ ಪಟ್ಟಣದಲ್ಲಿ ಪುರಾತತ್ವ ಇಲಾಖೆಯಿಂದ ಸರ್ವೇ ಕಾರ್ಯ ನಡೆಸಲಾಗುತ್ತಿದ್ದು, ದೇಗುಲದ ಸಮೀಪ ಇರುವ ನಾಗಮಂಗಲ ಪಟ್ಟಣದ ಜನರಲ್ಲಿ ಆತಂಕ ಮನೆ ಮಾಡಿದೆ.

ಸೌಮ್ಯಕೇಶವ ದೇಗುಲ ಸುತ್ತ 300 ಮೀಟರ್  ವ್ಯಾಪ್ತಿಯಲ್ಲಿ ಇರುವ 2 ಸಾವಿರಕ್ಕೂ ಹೆಚ್ಚು ಮನೆಗಳು, 20 ಕ್ಕೂ ಹೆಚ್ಚು ಶಾಲಾ ಕಾಲೇಜುಗಳು ದೇಗುಲಗಳು ಇವೆ.

ಪೊಲೀಸರ ಭದ್ರತೆಯೊಂದಿಗೆ ದೇಗುಲದ ಸುತ್ತಲಿನ ಪ್ರದೇಶದಲ್ಲಿ ನಾಗಮಂಗಲ ಪುರಸಭೆ ಮತ್ತು  ಪುರಾತತ್ವ ಇಲಾಖೆಯ ಸಿಬ್ಬಂದಿಗಳಿಂದ ಸರ್ವೇ ಕಾರ್ಯ ನಡೆಯುತ್ತಿದೆ.

ದೇಗುಲದ ನೆಪವೊಡ್ಡಿ ಇಲ್ಲಿನ  ನಿವಾಸಿಗಳನ್ನು  ಖಾಲಿ ಮಾಡಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ಸ್ಥಳೀಯ  ನಿವಾಸಿಗಳು ಆರೋಪಿಸಿದ್ದಾರೆ.

RELATED ARTICLES
- Advertisment -
Google search engine

Most Popular