Friday, June 13, 2025
Google search engine

Homeರಾಜ್ಯಕೇರಳದ ಜೈವಿಕ ಉದ್ಯಾನಕ್ಕೆ ಕರ್ನಾಟಕದಿಂದ ತಾಂತ್ರಿಕ ನೈಪುಣ್ಯ ಸಹಕಾರ: ಈಶ್ವರ ಖಂಡ್ರೆ

ಕೇರಳದ ಜೈವಿಕ ಉದ್ಯಾನಕ್ಕೆ ಕರ್ನಾಟಕದಿಂದ ತಾಂತ್ರಿಕ ನೈಪುಣ್ಯ ಸಹಕಾರ: ಈಶ್ವರ ಖಂಡ್ರೆ

ಬೆಂಗಳೂರು: ಕೇರಳದ ತ್ರಿಶೂರ್ ಜಿಲ್ಲೆಯ ಪುಥೂರ್‌ನಲ್ಲಿ ಆರಂಭಗೊಳ್ಳುತ್ತಿರುವ ಪ್ರಥಮ ಜೈವಿಕ ಉದ್ಯಾನಕ್ಕೆ ವನ್ಯಜೀವಿ ನಿರ್ವಹಣೆ ಮತ್ತು ಪಕ್ಷಿಗಳ ಸಂರಕ್ಷಣೆಗೆ ಕರ್ನಾಟಕದಿಂದ ತಾಂತ್ರಿಕ ಸಹಕಾರ ನೀಡಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸಮ್ಮತಿಸಿದ್ದಾರೆ.

ವಿಕಾಸಸೌಧದಲ್ಲಿ ಕೇರಳ ಅರಣ್ಯ ಸಚಿವ ಎ.ಕೆ. ಸಶೀಂದ್ರನ್ ಭೇಟಿಯಾಗಿ ಈ ಮನವಿ ಮಾಡಿದ್ದರು. ಆಸ್ಟ್ರೇಲಿಯಾದ ಜಾನ್ ಸಿಯೋ ವಿನ್ಯಾಸಗೊಳಿಸಿರುವ ಈ ಉದ್ಯಾನವು 136.8 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿದ್ದು, ಆಗಸ್ಟ್ ಅಂತ್ಯದೊಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ನೂತನ ಮೃಗಾಲಯಕ್ಕೆ ಕರ್ನಾಟಕದ ಮೃಗಾಲಯಗಳಿಂದ ಹೆಚ್ಚುವರಿ ವನ್ಯಜೀವಿಗಳನ್ನು ನೀಡುವಂತೆ ಕೇರಳ ಸಚಿವರು ಮನವಿ ಮಾಡಿದ್ದಾರೆ. ಈ ಸಭೆಯಲ್ಲಿ ಡೀಮ್ಡ್ ಅರಣ್ಯ ಮತ್ತು ಕಸ್ತೂರಿರಂಗನ್ ವರದಿಯ ಕುರಿತಂತೆ ಚರ್ಚೆ ನಡೆಯಿತು.

ಕರ್ನಾಟಕದ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಾದ ಮೀನಾಕ್ಷಿ ನೇಗಿ, ಸುಭಾಷ್ ಮಲ್ಕಡೆ, ಸುನೀಲ್ ಪನ್ವಾರ್ ಮತ್ತು ಕೇರಳದ ಮುಖ್ಯ ವನ್ಯಜೀವಿ ಪರಿಪಾಲಕ ಪ್ರಮೋದ್ ಜಿ ಕೃಷ್ಣನ್ ಸಭೆಯಲ್ಲಿ ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular