Monday, June 16, 2025
Google search engine

Homeಅಪರಾಧಮಹಿಳೆಯ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ : ದೇವಸ್ಥಾನದ ಅರ್ಚಕ ಬಂಧನ

ಮಹಿಳೆಯ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ : ದೇವಸ್ಥಾನದ ಅರ್ಚಕ ಬಂಧನ

ಬೆಂಗಳೂರು: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಇರುವ ಪ್ರಸಿದ್ಧ ಪೆರಿಗೊಟ್ಟುಕ್ಕಾರ ದೇವಾಲಯದ ಅರ್ಚಕ ಅರುಣ್ ಎಂಬಾತನು ಮಹಿಳೆಯೊಬ್ಬರ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ, ಬ್ಲ್ಯಾಕ್‌ಮೇಲ್ ಮಾಡಿದ ಪ್ರಕರಣದಲ್ಲಿ ಬೆಳ್ಳಂದೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು ನಿವಾಸಿ ಮಹಿಳೆಯೊಬ್ಬರು ತಾನು ಮನಸ್ಸಿನ ಶಾಂತಿಯಿಗಾಗಿ ಮತ್ತು ಮಾಟ ಮಂತ್ರ ಪರಿಹಾರಕ್ಕಾಗಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅರ್ಚಕ ಅರುಣ್ ಅವರೊಂದಿಗೆ ಪರಿಚಯವಾಗಿದ್ದು, ಪೂಜೆಗಾಗಿ ₹24,000 ಹಣ ಕೇಳಿದ್ದ. ಬಳಿಕ ನಂಬರ್ ಪಡೆದು ದಿನ ನಿಗದಿ ಮಾಡಿದ ಅರ್ಚಕ, ತಡರಾತ್ರಿ ವಾಟ್ಸಪ್ ಮೂಲಕ ನಿರಂತರವಾಗಿ ಕರೆಮಾಡುತ್ತಾ, ತಾನು ಬೆತ್ತಲೆಯಾಗಿ ನಿಂತು ವಿಡಿಯೋ ಕರೆ ಮಾಡುತ್ತಿದ್ದ.

ಅಷ್ಟೇ ಅಲ್ಲದೆ, “ನಿಮ್ಮ ಮಾಟಮಂತ್ರ ಪರಿಹಾರವಾಗಬೇಕಾದರೆ ನೀವೇ ಬೆತ್ತಲಾಗಬೇಕು” ಎಂದು ಮನಃಪೂರ್ವಕವಾಗಿ ಮಹಿಳೆಗೆ ಮಾನಸಿಕ ಹಿಂಸೆ ನೀಡುತ್ತಿದ್ದ. ಮಹಿಳೆ ವಿರೋಧ ವ್ಯಕ್ತಪಡಿಸಿದಾಗ, “ನಿನ್ನ ಇಬ್ಬರು ಮಕ್ಕಳು ಸಾಯೋ ಹಾಗೆ ರಿಟರ್ನ್ ಪೂಜೆ ಮಾಡ್ತೀನಿ” ಎಂದು ಬೆದರಿಕೆ ಹಾಕಿದ. ಹೆದರಿದ ಮಹಿಳೆ ತನ್ನ ಗೌಪ್ಯತೆ ಕಾಪಾಡಿಕೊಳ್ಳಲು ಅರ್ಚಕನ ಮಾತಿಗೆ ಒಳಪಟ್ಟಿದ್ದಳು. ಅದನ್ನು ಅರ್ಚಕ ಅರುಣ್ ವಿಡಿಯೋ ಮಾಡಿ, ಪುನಃ ಪುನಃ ಕೇರಳಕ್ಕೆ ಬರುವಂತೆ ಒತ್ತಾಯ ಮಾಡುತ್ತಿದ್ದ.

ಮಹಿಳೆ ನೀಡಿದ ದೂರಿನಲ್ಲಿ, ಅರ್ಚಕ ಅರುಣ್‌ ಅವಳನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಹೇಳಿದ್ದಾಳೆ. ಅದಲ್ಲದೆ, ಮಹಿಳೆ ಬರುವಾಗ ರೂಮ್ ಬುಕ್ ಮಾಡಿಸುತ್ತೇನೆ ಎಂದು ಚಿತ್ರಹಿಂಸೆ ನೀಡಿ ಆಕೆಯ ಮೇಲೆ ಅನೈತಿಕ ಒತ್ತಡ ಹೇರಿದ ಆರೋಪವಿದೆ.

ಈ ಸಂಬಂಧ ಮಹಿಳೆ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಆರೋಪ ಪರಿಶೀಲಿಸಿದ ಪೊಲೀಸರು ಅರ್ಚಕ ಅರುಣ್‌ನನ್ನು ಬಂಧಿಸಿದ್ದು, ಇನ್ನು ಮುಖ್ಯ ಅರ್ಚಕ ಉನ್ನಿ ದಾಮೋದರ್‌ನ್ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಆತನ ಶೋಧ ಆರಂಭಿಸಲಾಗಿದೆ. ಘಟನೆಯ ತೀವ್ರತೆಗಾಗಿ ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES
- Advertisment -
Google search engine

Most Popular