Monday, April 21, 2025
Google search engine

Homeರಾಜ್ಯರೈತರ ಬಾಯಿಗೆ ಮಣ್ಣು ಹಾಕಿದ ಸರ್ಕಾರ: ಮಣ್ಣು ಬಾಯಿಗೆ ಹಾಕಿಕೊಂಡು ರೈತರ ಆಕ್ರೋಶ

ರೈತರ ಬಾಯಿಗೆ ಮಣ್ಣು ಹಾಕಿದ ಸರ್ಕಾರ: ಮಣ್ಣು ಬಾಯಿಗೆ ಹಾಕಿಕೊಂಡು ರೈತರ ಆಕ್ರೋಶ

ಮಂಡ್ಯ: ಬಂದ್ ಹಿನ್ನೆಲೆ ಸಂಜಯ ವೃತ್ತದಲ್ಲಿ ಕಾವೇರಿ ಹೋರಾಟ ಕಾವೇರಿದ್ದು, ಮಣ್ಣು ಬಾಯಿಗೆ ಹಾಕಿಕೊಂಡು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ತಮಿಳುನಾಡಿಗೆ ನೀರು ಬಿಟ್ಟು ರೈತರ ಬಾಯಿಗೆ ಸರ್ಕಾರ ಮಣ್ಣು ಹಾಕಿದೆ‌ ಎಂದು ಪ್ರತಿಭಟನಾಕಾರರು  ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಬರಗಾಲದ ಮುಖ್ಯಮಂತ್ರಿ. ಸರ್ಕಾರದ ಬಾಯಿಗೆ ಮಣ್ಣು ಹಾಕಬೇಕು ಎಂದು ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಕಿಡಿಕಾರಿದ್ದಾರೆ.

ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ಆಗಮಿಸಿ ಬಂದೋ ಬಸ್ತ್ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಡಿಸಿ ಡಾ.ಕುಮಾರ್, ಎಸ್ ಪಿ ಎನ್.ಯತೀಶ್ ರಿಂದ ಮಾಹಿತಿ ಪಡೆದಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ತಡೆ ಹಿನ್ನೆಲೆ ಕೆಲವೆಡೆ ಟ್ರಾಫಿಕ್ ಡೈವರ್ಶನ್ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

RELATED ARTICLES
- Advertisment -
Google search engine

Most Popular