ಮೈಸೂರು: ವೈದ್ಯ ವೃತ್ತಿಅತ್ಯಂತ ಪವಿತ್ರ ವೃತ್ತಿಯಾಗಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದುರಜತೆಗೆ ವೃತ್ತಿ ಪಾವಿತ್ರತೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಇಂದಿನ ವೈದ್ಯರ ಮೇಲಿದೆಎಂದು ಶಾಸಕ ಟಿ.ಎಸ್.ಶ್ರೀವತ್ಸ ಅಭಿಮತ ವ್ಯಕ್ತಪಡಿಸಿದರು.
ನಗರದಚಾಮುಂಡಿಪುರಂನಲ್ಲಿರುವ ಬಾಲಬೋದಿನಿ ಶಾಲೆಯಲ್ಲಿಅಪೂರ್ವ ಸ್ನೇಹ ಬಳಗ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಮಾತನಾಡಿದಅವರು, ಜನತೆ ವೈದ್ಯರನ್ನುದೇವರಂತೆಕಾಣುತ್ತಾರೆ. ಆದರೆ, ವೈದ್ಯ ವೃತ್ತಿಯಲ್ಲಿ ರೋಗಿಗಳೇ ದೇವರು. ವೈದ್ಯರುಅರ್ಚಕರಿಂದ್ದಂತೆಆಸ್ಪತ್ರೆಯೇದೇವಾಲಯ. ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸಲು ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಶ್ರಮಿಸಬೇಕು. ಕೆಲವು ವೈದ್ಯರ ವರ್ತನೆಯಿಂದಾಗಿ ಶ್ರೀಸಾಮಾನ್ಯರಲ್ಲಿ ವ್ಯತಿರಿಕ್ತ ಮನೋಭಾವ ಬೆಳೆದಿರುವುದು ಕಳವಳಕಾರಿ. ಇಡೀ ವೈದ್ಯಕೀಯಕ್ಷೇತ್ರದಲ್ಲಿಆದರಣೀಯ ಗುಣಗಳನ್ನು ಅಳವಡಿಸಿಕೊಂಡು ಸೇವೆಗೆ ಪ್ರಥಮಆದ್ಯತೆ ನೀಡಿದಾಗಲೇ ಸಾರ್ಥಕವಾಗುತ್ತದೆಎಂದು ಪ್ರತಿಪಾಧಿಸಿದರು
ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ಮಾಡಿ ಮಾತನಾಡಿ, ಜನರಆರೋಗ್ಯಜಾಗೃತಿಗೆಉಚಿತಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡಜನತೆಆರೋಗ್ಯದ ಬಗ್ಗೆ ನಿರ್ಲಕ್ಷ್ಯತೋರದೆತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡುಉಚಿತಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು, ಉಚಿತಆರೋಗ್ಯತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯಕಾರ್ಯವಾಗಿದೆಎಂದರು
ನಂತರ ಮಾತನಾಡಿದ ನಾರಾಯಣ ಹೃದಯಾಲಯದ ವೈದ್ಯಕೀಯ ನಿರ್ದೇಶಕಡಾ.ಎಂ.ಎನ್.ರವಿ ಮಾತನಾಡಿ, ರೋಗಿಗಳೊಂದಿಗೆ ವೈದ್ಯರು ಹೆಚ್ಚುಹೊತ್ತು ಮಾತನಾಡಿದಷ್ಟುಆತ್ಮವಿಶ್ವಾಸ ರೋಗಿಗಳಲ್ಲಿ ಬೆಳೆಯುತ್ತದೆ. ಜತೆಗೆಕಾಯಿಲೆಯ ಬಗ್ಗೆ ವೈದ್ಯರಿಗೂ ಸ್ಪಷ್ಠತೆ ಸಿಗುತ್ತದೆ. ಇದರಿಂದಾಗಿಅಗತ್ಯಚಿಕಿತ್ಸೆಯನ್ನುಅತ್ಯಂತ ಪರಿಣಾಮಕಾರಿಯಾಗಿ ನೀಡಲು ಸಹಾಯವಾಗುತ್ತದೆ. ಹೀಗಾಗಿ, ವೈದ್ಯರು ಸಾಧ್ಯವಾದಷ್ಟು ವಿವರವಾಗಿ ರೋಗಿಗಳೊಂದಿಗೆ ಸಂವಹನ ನಡೆಸಬೇಕುಎಂದರು.
ನಾರಾಯಣ ಹೃದಯಾಲಯ ವೈದ್ಯರುಇದೇ ಸಂದರ್ಭದಲ್ಲಿ ೧೨೦ ರೋಗಿಗಳಿಗೆ ಉಚಿತಆರೋಗ್ಯತಪಾಸಣೆ ಮಾಡಿದರು. ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಇಸಿಜಿ ಮತ್ತು ಇಕೋ ಸಾಮಾನ್ಯಆರೋಗ್ಯ ತಪಾಸಣೆಗಳನ್ನು ನಾರಾಯಣಆಸ್ಪತ್ರೆಯ ವೈದ್ಯರು ಮಾಡಿದರು.
ಕಾರ್ಯಕ್ರಮದಲ್ಲಿಕರ್ನಾಟಕ ಸಂಸ್ಕೃತಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ,ಪದ್ಮಶೇಖರ್, ಹಿರಿಯ ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ, ಹೋಟೆಲ್ ಮಾಲೀಕರ ಸಂಘದಅಧ್ಯಕ್ಷ ನಾರಾಯಣಗೌಡ, ಬಿಜೆಪಿ ಮಹಿಳಾ ಮೋರ್ಚಾಅಧ್ಯಕ್ಷೆ ಹೇಮಾನಂದೀಶ್, ನಗರಪಾಲಿಕೆ ಸದಸ್ಯ ಮಾವಿ ರಾಮಪ್ರಸಾದ್, ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಕೆ.ಆರ್.ಬ್ಯಾಂಕ್ಉಪಾಧ್ಯಕ್ಷ ಬಸವರಾಜ ಬಸಪ್ಪ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷಅಪೂರ್ವ ಸುರೇಶ್, ಕೆಎಂಪಿಕೆ ಟ್ರಸ್ಟ್ಅಧ್ಯಕ್ಷ ವಿಕ್ರಮಅಯ್ಯಂಗಾರ್, ಅಜಯ್ ಶಾಸ್ತ್ರಿ, ಉದ್ಯಮಿ ಜಯರಾಮ್, ದೂರರಾಜಣ್ಣ, ಸುಚೇಂದ್ರ, ಚಕ್ರಪಾಣಿ,P ನಕ ಮೂರ್ತಿ, ಜಗದೀಶ್ ಹಾಗೂ ಇನ್ನಿತರರು ಭಾಗವಹಿಸಿದ್ದರು.