Saturday, June 14, 2025
Google search engine

Homeರಾಜ್ಯಸುದ್ದಿಜಾಲಪರಿಸರ ನಾಶದ ನಡುವೆ ನರ್ಸರಿ ಅಗತ್ಯತೆ ಹೆಚ್ಚುತ್ತಿದೆ: ಹೊಸೂರು ಕುಮಾರ್

ಪರಿಸರ ನಾಶದ ನಡುವೆ ನರ್ಸರಿ ಅಗತ್ಯತೆ ಹೆಚ್ಚುತ್ತಿದೆ: ಹೊಸೂರು ಕುಮಾರ್

ಹುಣಸೂರು: ಪ್ರಕೃತಿ ನಾಶ ಮಾಡುವ ಈ ಸಂದರ್ಭದಲ್ಲಿ ಪರಿಸರ ಉಳಿಸಿ, ಬೆಳೆಸುವ ನರ್ಸರಿ ಅವಶ್ಯಕತೆ ಇದೆ ಎಂದು ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಿಳಿಸಿದರು.

ನಗರದ ಹೊರ ಹೊಲಯದ ಹಾಲಗೆರೆಯ ಮಂಗಳೂರು ಹುಣಸೂರು ಮುಖ್ಯ ರಸ್ತೆಯ ಬದಿಯಲ್ಲಿ ಇರುವ ನಂಜುಂಡೇಶ್ವರ ಹೈಟೆಕ್ ನರ್ಸರಿ ಉದ್ಘಾಟಿಸಿ ಮಾತನಾಡಿದ ಅವರು, ಹುಣಸೂರಿನ ಐದು ಸರಕಾರಿ ಶಾಲೆಗಳಿಗೆ ತಲಾ ಹತ್ತು ಹೊಂಗೆ ಸಸಿಗಳನ್ನು ನೀಡುವ ಮೂಲಕ ಪರಿಸರಕ್ಕೆ ನಾಂದಿ ಹಾಡಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದರು.

ಅದೇ ರೀತಿ ಅಷ್ಟೂ ಸರಕಾರಿ ಶಾಲೆಯ ಎರಡು ಬಡ ಮಕ್ಕಳಿಗೆ ನೋಟ್ ಬುಕ್ , ಪೆನ್ಸಿಲ್ ನೀಡುವ ಔದಾರ್ಯವನ್ನು ನರ್ಸರಿ ಯುವ ಮಾಲಿಕ ಕಲ್ಕುಣಿಕೆಯ ಅರುಣ್ ಕುಮಾರ್ ಮಾಡುತ್ತಿರುವುದು ಮಾನವೀಯ ಮತ್ತು ಪ್ರಸ್ತುತ ಅಮೂಲ್ಯವಾದ ಕಾರ್ಯವಾಗಿದ್ದು. ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.

ಎ.ಎಸ್.ಐ. ಬಿ.ಕೆ. ಬಸಪ್ಪ ಮಾತನಾಡಿ, ಕಮರ್ಷಿಯಲ್ ಯುಗದಲ್ಲಿ. ಮನವೀಯ ನೆಲೆಗಟ್ಟಿನಲ್ಲಿ . ರೈತರಿಗೆ ಬೇಕಾದ ತೆಂಗು, ಅಡಿಕೆ, ಬೇವು, ಹೊಂಗೆ, ಸಪೋಟ, ಮಾವು, ಇನ್ನಿತರೆ ಹಣ್ಣು ಸಸಿಗಳನ್ನು ಕಡಿಮಿ ದರದಲ್ಲಿ ನೀಡಿ. ಜನರ ಬದುಕಿಗೆ ಹತ್ತಿರವಾಗಿರುವ ಈ ನರ್ಸರಿ ಉನ್ನತ ಮಟ್ಟಕ್ಕೆ ಬೆಳಯಲಿ ಎಂದರು.

ಕಾರ್ಯಕ್ರಮದಲ್ಲಿ, ಮಾಲಿಕ ಅರುಣ್ ಕುನಾರ್, ದಿನೇಶ್, ನಿಲವಾಗಿಲು ನಾರಾಯಣ್, ಉದ್ಯಮಿ ಗೌತಮ್, ವಕೀಲರಾದ ಪುಟ್ಟರಾಜು, ವಿಲಿಯಮ್ಸ್, ಜೋಗಿ, ಧನಂಜಯ್, ಇನ್ನೂ ಹಲವಾರು ಸ್ನೇಹಿತರು ಇದ್ದರು.

RELATED ARTICLES
- Advertisment -
Google search engine

Most Popular