Friday, April 18, 2025
Google search engine

Homeರಾಜ್ಯಸುದ್ದಿಜಾಲಮೈಸೂರು ಸಂಸ್ಥಾನದ ಧಾರ್ಮಿಕ ಪರಂಪರೆ ಬೆಳೆದು ಬಂದಿದೆ: ಯದುವೀರ್

ಮೈಸೂರು ಸಂಸ್ಥಾನದ ಧಾರ್ಮಿಕ ಪರಂಪರೆ ಬೆಳೆದು ಬಂದಿದೆ: ಯದುವೀರ್

ಶ್ರೀರಂಗಪಟ್ಟಣ:ನೂರಾರು ವರ್ಷಗಳಿಂದ ಮೈಸೂರು ಸಂಸ್ಥಾನದಲ್ಲಿ ಧಾರ್ಮಿಕ ಪರಂಪರೆ ಸಂಪ್ರದಾಯಗಳ ಜೊತೆ ಬೆಳೆದು ಬಂದಿದೆ ಎಂದು ಮೈಸೂರು ರಾಜ ವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ತಾಲೂಕಿನ ಬಳಗೊಳ ಬಳಿಯ ವಿಶ್ವ ಮಂಗಳ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯಕ್ಕೆ ದೀರ್ಘಸತ್ರ ಮಹಾಯಾಗದ ವಿಶೇಷ ಪೂರ್ಣಾಹುತಿ ಪ್ರಯುಕ್ತ ಆಗಮಿಸಿ ಸಂಸ್ಕೃತ ಶಾಲೆಯ ಆಗಮಿಕ ವಿದ್ಯಾರ್ಥಿಗಳ ಕುರಿತು ಅವರು ಮಾತನಾಡಿದರು.
೪೦೦ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಮೈಸೂರು ಸಂಸ್ಥಾನದ ರಾಜರು ವಿಜಯನಗರ ಆಳ್ವಿಕೆ ಕಾಲದಿಂದಲೂ ರಾಜ ಒಡೆಯರ್ ನಡೆಸಿಕೊಂಡು ಬಂದ ಪಾರಂಪರಿಕ ಶ್ರೀ ವೈಷ್ಣವ ಸಂಪ್ರದಾಯಗಳು ವಿಶ್ವದಲ್ಲಿ ಹೆಸರಾಗಿದೆ.ಅದರಲ್ಲಿ ಧಾರ್ಮಿಕವಾಗಿ ಯೋಗ ಪರಂಪರೆಯು ಸಹ ಇದರಲ್ಲಿ ಸೇರಿದೆ.ನಾವು ಹಿಂದು ಸಂಪ್ರದಾಯವನ್ನು ಯಾವತ್ತು ಮರೆಯಬಾರದು,ಇದರ ಪಾಲನೆ ಅಗತ್ಯವಾಗಿದೆ ಹಿರಿಯರು ಕಲಿಸಿದ್ದನ್ನು ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿಗೆ ಕೆಲವರು ಮಾರು ಹೋಗುತ್ತಿದ್ದು ಇದು ಸರಿಯಲ್ಲದ ಬೆಳವಣಿಗೆಯಾಗಿದೆ.

ಪ್ರತಿಯೊಬ್ಬರು ಯೋಗದ ಬಗ್ಗೆ ಆಸಕ್ತಿ ಬೆಳಸಬೇಕು ಇದರಿಂದ ನಮ್ಮ ಆರೋಗ್ಯಕ್ಕೆ ಒಳೆಯದಾಗಿದೆ ಇದು ಕೂಡ ನಮ್ಮ ಹಿಂದೂ ಧರ್ಮದ ಭಾಗವಾಗಿದೆ, ಪರಕಾಲ ಮಠದವತಿಯಿಂದ ನಡೆಯುವ ಎಲ್ಲ ಪೂಜಾಕೈಂಕರ್ಯಗಳಿಗೆ ನಾವು ಬದ್ದರಾಗಿದ್ದೇವೆ ಎಂದರು.

ಮುಮ್ಮಡಿ ಕೃಷ್ಣರಾಜ ಒಡೆಯರ್ ಯೋಗಕ್ಕೆ ಅಂದಿನ ಕಾಲದಲ್ಲಿ ಮಹತ್ವ ತಿಳಿಸಿ ಧಾರ್ಮಿಕ ಕ್ಷೇತ್ರದಲ್ಲಿ ದೇವಾಲಯ ನಿರ್ಮಾಣದ ಪರಂಪರೆ ಅಭಿವೃದ್ದಿ ಜೊತೆಗೆ ಯೋಗ ಶಿಕ್ಷಣವನ್ನು ಸ್ಥಾಪಿಸಿದರು. ರಾಜ ಮನೆತನಕ್ಕೆ ಪರಕಾಲ ಸ್ವಾಮೀಜಿ ಹಾಗೂ ಶೃಂಗೇರಿ ಶಂಕರಾಚಾರ‍್ಯರ ಆಶೀರ್ವಾದ ಇರುವುದರಿಂದ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಕೂಡ ಈ ಭಾಗದಲ್ಲಿ ನೀರಾವರಿ ಯೋಜನೆಗಳು, ಶಿಕ್ಷಣ ,ಜನರಿಗೆ ಉದ್ಯೋಗ ನೀಡುವ ಕಾರ್ಖಾನೆಗಳ ಮೂಲಕ ತಾಂತ್ರಿಕತೆಯನ್ನು ಬೆಳೆಸಿಕೊಂಡು ಹಲವು ಯೋಜನೆಗಳನ್ನು ಸ್ಥಾಪಿಸಿ ಇಲ್ಲಿನ ಜನರ ಕಷ್ಟಗಳಿಗೆ ಸ್ಪಂದನೆ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಅದರಂತೆ ನಾವು ಕೂಡ ಅವರ ಮಾರ್ಗದರ್ಶನದ ಅನುಭವಗಳನ್ನು ಪಡೆಯುತ್ತಿದ್ದೇವೆ ಎಂದು ಅವರು ತಿಳಿಸಿದರು.
ನಂತರ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ ಮುಖ್ಯಸ್ಥರು ಅವರನ್ನು ಸನ್ಮಾನಿಸಿ ಗೌರವಿಸಿದರು.

ವಿಶ್ವಮಂಗಳ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಮುಖ್ಯ ಅಧ್ಯಕ್ಷರು ವೀರರಾಘವಸ್ವಾಮೀಜಿ, ದೇವಾಲಯದ ನಿರ್ದೇಶಕ ಲಕ್ಷ್ಮೀ ನಾರಾಯಣ್, ನಟ ಸುಚೇಂದ್ರ ಪ್ರಸಾದ್ ,ವ್ಯವಸ್ಥಾಪಕ ಸಂತೊಷ್ ಆಚಾರ‍್ಯ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular