Friday, April 18, 2025
Google search engine

Homeಸ್ಥಳೀಯವರ್ಗಾವಣೆ ದಂಧೆ ಆರೋಪ: ಹೆಚ್ ಡಿಕೆಗೆ ತಿರುಗೇಟು ನೀಡಿದ ಚಲುವರಾಯಸ್ವಾಮಿ

ವರ್ಗಾವಣೆ ದಂಧೆ ಆರೋಪ: ಹೆಚ್ ಡಿಕೆಗೆ ತಿರುಗೇಟು ನೀಡಿದ ಚಲುವರಾಯಸ್ವಾಮಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ ಮಾಡಿ ರೇಟ್ ಕಾರ್ಡ್ ಬಿಡುಗಡೆ ಮಾಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದು, ಬಹುಶಃ ಹೆಚ್.ಡಿಕೆ ಸಿಎಂ ಆಗಿದ್ದಾಗ ಇದ್ದ ರೇಟ್ ಕಾರ್ಡ್ ಅನ್ಸುತ್ತೆ. ಚೆನ್ನಾಗೇ ಮಾಡಿದ್ದಾರೆ ಅಭಿನಂದನೆ ಸಲ್ಲಿಸಬೇಕು ಎಂದಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಹೆಚ್.ಡಿ ಕುಮಾರಸ್ವಾಮಿ ಹತಾಶರಾಗಿದ್ದಾರೆ.  ಹೆಚ್ ಡಿಕೆ ಆರೋಪಗಳಿಗೆಲ್ಲಾ ಸಿಎಂ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.

ನಾನು ಒಕ್ಕಲಿಗೆ ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ನಾನು ಹೆಚ್.ಡಿ ದೇವೇಗೌಡರು ಅವರ ಕುಟಂಬದ ಬಗ್ಗೆ ಮಾತಾಡಿಲ್ಲ. ಹೆಚ್ ಡಿಕೆ ವಿಚಾರ ಎತ್ತಿದ್ರೆ ಸಾಕು ಕುಟುಂಬ ಅಂತಾರೆ. ಕುಮಾರಸ್ವಾಮಿ ಯಾವಾಗಲೂ ಕುಟುಂದ ಜಪ ಮಾಡಬಾರದು. ಲೋಕಸಭಾ ಚುನಾವಣೆ ಇದೆ.  ಹೀಗಾಗಿ ನನ್ನ ಮಂಡ್ಯ ಅಂತಿದ್ದಾರೆ ಎಂದು ಕಿಡಿಕಾರಿದರು.

RELATED ARTICLES
- Advertisment -
Google search engine

Most Popular