ಮೈಸೂರು: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ಮೈಸೂರಿನ ಪ್ರವಾಸೋದ್ಯಮದ ಹಿರಿಯ ಮಾರ್ಗದರ್ಶಿಗಳನ್ನ (ಗೈಡ್) ಗಳಿಗೆ ಮೈಸೂರು ಅರಮನೆಯ ವರಹಾ ದ್ವಾರದ ಮುಂಭಾಗ ಹಿರಿಯ ಗೈಡ್ ಶ್ರೀಕಂಠ, ಗುರುಸ್ವಾಮಿ, ಕೆ ಆರ್ ಎಸ್ ರವಿ, ಚಂದ್ರು ,ಶಂಕ್ರಣ್ಣ, ಸನ್ಮಾನಿಸಲಾಯಿತು.
ಇದೇ ಸಂಧರ್ಭದಲ್ಲಿ ಸಮಾಜ ಸೇವಕರಾದ ನಜರಬಾದ್ ನಟರಾಜ್ ರವರು ಮಾತನಾಡಿ ಮೈಸೂರಿನ ಇತಿಹಾಸ ಪ್ರೇಕ್ಷಣೀಯ ಸ್ಥಳಗಳನ್ನ ಸಮಗ್ರ ಮಾಹಿತಿಯನ್ನ ಪ್ರವಾಸಿಗರಿಗೆ ತಿಳಿಸಿ ಸುರಕ್ಷಿತವಾಗಿ ಪ್ರತಿದಿನ ಪ್ರವಾಸವನ್ನ ಮಾಡಿಸುವ ಹಿರಿಯ ಮಾರ್ಗದರ್ಶಿಗಳ ಸೇವೆ ಶ್ಲಾಘನೀಯ, ಎಷ್ಟೇ ಡಿಜಿಟಲ್ ತಂತ್ರಜ್ಞಾನ ಮುಂದವರೆದರೂ ಸಹ ಪ್ರವಾಸಿ ಮಾರ್ಗದರ್ಶಿಗಳಿಗೆ ಮಾನ್ಯತೆ ಇದ್ದೇ ಇರುತ್ತದೆ ಆದರೆ ಮೈಸೂರಿನ ಪ್ರವಾಸಿ ಮಾರ್ಗದರ್ಶಿಗಳ ವೃತ್ತಿಪರರನ್ನ ಪ್ರೋತ್ಸಾಹಿಸಲು ಸಂಘ ಸಂಸ್ಥೆಗಳು ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಲಸ್ಕರ್ ಪೊಲೀಸ್ ಠಾಣೆಯ ಪಿಎಸ್ಐ ರಾಧಾ, ಸಮಾಜ ಸೇವಕರಾದ
ನಜರ್ಬಾದ್ ನಟರಾಜ್, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷರಾದ ಜಿ ರಾಘವೇಂದ್ರ, ನಿರೂಪಕ ಅಜಯ್ ಶಾಸ್ತ್ರಿ, ಸಂತೋಷ್ ಕಿರಾಳು, ರವಿಚಂದ್ರ, ವರುಣ ಮಹದೇವ್, ಲೋಕೇಶ್, ದಿನೇಶ್, ಎಸ್ ಎನ್ ರಾಜೇಶ್, ರಾಕೇಶ್, ಹರೀಶ್ ನಾಯ್ಡು, ಶಫಿ, ಹಾಗೂ ಇನ್ನಿತರರು ಹಾಜರಿದ್ದರು.