Saturday, April 19, 2025
Google search engine

Homeರಾಜ್ಯತುಮಕೂರು: ಅನ್ನ ಭಾಗ್ಯ ಯೋಜನೆಗೆ 30 ಕೋಟಿ ಹಣ ಬಿಡುಗಡೆ

ತುಮಕೂರು: ಅನ್ನ ಭಾಗ್ಯ ಯೋಜನೆಗೆ 30 ಕೋಟಿ ಹಣ ಬಿಡುಗಡೆ

ತುಮಕೂರು:  ಜಿಲ್ಲೆಯ ಅನ್ನ ಭಾಗ್ಯ ಯೋಜನೆಗೆ ರಾಜ್ಯ ಸರ್ಕಾರ 30 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಅನ್ನಭಾಗ್ಯ ಯೋಜನೆ ಯಶಸ್ವಿಗೆ ಜಿಲ್ಲಾಢಳಿತ ಅವಿರತ ಪ್ರಯತ್ನ ಮಾಡಿದೆ ಎಂದು ಮಕೂರು ಜಿಲ್ಲಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತುಮಕೂರು ಜಿಲ್ಲೆಯಲ್ಲಿ 6,61,625  ಪಡಿತರ ಚೀಟಿಗಳಿವೆ. ಇದರಲ್ಲಿ 5,29,000 ಫಲನುಭವಿಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗಿದೆ. ನೇರ ಹಣ ಪಾವತಿ ಮೂಲಕ(DBT) ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ. ಎರಡು ಮೂರು ದಿನಗಳಲ್ಲಿ ಹಣ ಜಮೆ  ಆಗುತ್ತದೆ ಎಂದರು.

19,000 ಪಡಿತರ ಚೀಟಿಗಳು ಇನ್ ಆಕ್ಟೀವ್ ಆಗಿವೆ. ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗಳನ್ನು ಆಕ್ಟೀವ್ ಮಾಡಲು ಸೂಚನೆ.  50 ಸಾವಿರ ಕಾರ್ಡ್ ದಾರರು ಬ್ಯಾಂಕ್ ಖಾತೆ ಹೊಂದಿಲ್ಲ. ಗ್ರಾಮದ ಅಂಚೆ ಇಲಾಖೆಯಲ್ಲೇ ಬ್ಯಾಂಕ್ ಖಾತೆ ತೆರೆಯಲು ಯೋಜನೆ ರೂಪಿಸಿದ್ದೇವೆ. ಆದ್ದರಿಂದ ಸಾರ್ವಜನಿಕರು ಸಹಕಾರ ಕೊಡಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

RELATED ARTICLES
- Advertisment -
Google search engine

Most Popular