ತುಮಕೂರು: ಕೆ.ಐ.ಆರ್.ಡಿ.ಎಲ್ ಇಂಜಿನಿಯರ್ ಹನುಮಂತರಾಯಪ್ಪ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಎಸ್ಪಿ ವಲಿ ಬಾಷಾ ಮಾತನಾಡಿ, ಹನುಮಂತರಾಯಪ್ಪರ ಆಸ್ತಿ ಆದಾಯಕ್ಕಿಂತ 164 ರಷ್ಟು ಜಾಸ್ತಿಯಾಯಿದ್ದು, ಒಟ್ಟು 3.69 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಮೂರು ಅಂತಸ್ತಿನ ಮೂರು ಮನೆಗಳು ಇವೆ. ಗುಬ್ಬಿ ತಾಲೂಕಿನಲ್ಲಿ 8 ಎಕರೆ ಜಮೀನು ಖರೀದಿಸಿದ್ದಾರೆ.
ಮಧುಗಿರಿ ಪಟ್ಟಣದಲ್ಲಿ ಎರಡು ನಿವೇಶ, ಮಲ್ಲಸಂದ್ರ ಹಾಗೂ ಬಡಕನಪಾಳ್ಯದಲ್ಲಿ ತಲಾ ಒಂದೊಂದು ಫಾರ್ಮ್ ಹೌಸ್ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
