Friday, April 11, 2025
Google search engine

Homeಅಪರಾಧತುಮಕೂರು:ಅಳಿಯ-ಮಗಳ ಜಗಳ ಬಿಡಿಸಲು ಹೋಗಿ ಕೊಲೆಯಾದ ಅತ್ತೆ

ತುಮಕೂರು:ಅಳಿಯ-ಮಗಳ ಜಗಳ ಬಿಡಿಸಲು ಹೋಗಿ ಕೊಲೆಯಾದ ಅತ್ತೆ

ತುಮಕೂರು : ಅಳಿಯ- ಮಗಳ ಜಗಳ ಬಿಡಿಸಲು ಹೋಗಿ ಅತ್ತೆ ಕೊಲೆಯಾದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆದಿದೆ.

ಅಶ್ವಿತ್ ಉನ್ನಿಸಾ (58) ಕೊಲೆಯಾದ ದುರ್ದೈವಿ.ತುಮಕೂರು ತಾಲೂಕಿನ ಬೆಳಗುಂಬ ನಿವಾಸಿಯಾಗಿದ್ದ ಅಶ್ವಿತ್ ಉನ್ನಿಸಾ. ತನ್ನ ಮಗಳನ್ನ ಕೊಡಿಗೇನಹಳ್ಳಿ ನಿವಾಸಿ ಸೈಯದ್ ಸುಹೇಲ್ ಎಂಬಾತನಿಗೆ ಕೊಟ್ಟು ಮದುವೆ ಮಾಡಿದ್ರು. ಕೌಟುಂಬಿಕ ಕಲಹಕ್ಕೆ ಪ್ರತಿದಿನ ಮಗಳ ಜೊತೆ ಜಗಳವಾಡುತ್ತಿದ್ದ ಅಳಿಯ ಸೈಯದ್ ಸುಹೇಲ್.

ಜಗಳ ವಿಕೋಪಕ್ಕೆ ತಿರುಗಿದ ಹಿನ್ನೆಲೆ, ತವರು ಮನೆಯಲ್ಲಿದ್ದ ತಾಯಿಯನ್ನ ಪೋನ್ ಮಾಡಿ ಕರೆಸಿಕೊಂಡಿದ್ದ ಮಗಳು. ಅಳಿಯ-ಮಗಳ ಜಗಳ ಬಿಡಿಸಲು ಹೋದ ವೇಳೆ ದೊಣ್ಣೆಯಿಂದ ಅಶ್ವಿತ್, ಉನ್ನಿಸಾ ತಲೆಗೆ ಅಳಿಯ ಹೊಡೆದಿದ್ದಾನೆ . ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅಶ್ವಿತ್ ಉನ್ನಿಸಾಳನ್ನ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪಿದ ಅಶ್ವಿತ್ ಉನ್ನಿಸಾ. ಘಟನಾ ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.

RELATED ARTICLES
- Advertisment -
Google search engine

Most Popular