Monday, June 9, 2025
Google search engine

Homeಅಪರಾಧಹನಿಮೂನ್‌ಗೆ ತೆರಳಿ ನಾಪತ್ತೆಯಾದ ನವದಂಪತಿ ಪ್ರಕರಣಕ್ಕೆ ಟ್ವಿಸ್ಟ್: ಪತ್ನಿ ಸೇರಿ ನಾಲ್ವರ ಬಂಧನ

ಹನಿಮೂನ್‌ಗೆ ತೆರಳಿ ನಾಪತ್ತೆಯಾದ ನವದಂಪತಿ ಪ್ರಕರಣಕ್ಕೆ ಟ್ವಿಸ್ಟ್: ಪತ್ನಿ ಸೇರಿ ನಾಲ್ವರ ಬಂಧನ

ಮೇಘಾಲಯ: ಮಧ್ಯಪ್ರದೇಶದ ಇಂದೋರಿನ ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ಮೇ 11ರಂದು ಅದ್ದೂರಿಯಾಗಿ ಮದುವೆಯಾಗಿ, ಮೇ 20ರಂದು ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದ್ದರು. ಆದರೆ, ಮೇ 23 ರಂದು ಇಬ್ಬರೂ ನಾಪತ್ತೆಯಾಗಿದ್ದು, ನಂತರ ರಾಜಾ ರಘುವಂಶಿಯ ಮೃತದೇಹ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ವೀ ಸಾವ್ಡಾಂಗ್ ಜಲಪಾತದ ಆಳದಲ್ಲಿ ಪತ್ತೆಯಾದ ಹಿನ್ನೆಲೆ, ಪ್ರಕರಣ ಕುತೂಹಲ ಮೂಡಿಸಿತ್ತು. ಅವರ ಜತೆಗೆ ಇರುವ ಜಾಕೆಟ್, ಮಾತ್ರೆ ಚೀಟಿಗಳು, ಸ್ಮಾರ್ಟ್‌ಫೋನ್‌ಗಳು ಪತ್ತೆಯಾದರೂ ಪತ್ನಿ ಸೋನಮ್ ರಘುವಂಶಿ ಮಾತ್ರ ನಾಪತ್ತೆಯಾಗಿದ್ದರು.

ಪೊಲೀಸರು ಮುಂದಿನ ತನಿಖೆ ನಡೆಸಿದಾಗ, ದಂಪತಿಗಳು ಬಾಡಿಗೆಗೆ ಪಡೆದಿದ್ದ ಸ್ಕೂಟರ್ ಸೊಹ್ರಾರಿಮ್ ಹಳ್ಳಿ ಬಳಿಯಲ್ಲಿ ಪತ್ತೆಯಾಗಿದ್ದು, ಕೊಲೆ ಅಥವಾ ಅಪಹರಣದ ಶಂಕೆ ಹೆಚ್ಚಾಯಿತು. ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸೋನಮ್ ತನ್ನ ಪತಿಯ ಹತ್ಯೆಗೆ ನೇರವಾಗಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ. ಜೂನ್ 8ರಂದು ಉತ್ತರಪ್ರದೇಶದ ಘಾಜಿಪುರ ಪೊಲೀಸರ ಮುಂದೆ ಶರಣಾದ ಸೋನಮ್ ನೀಡಿದ ಮಾಹಿತಿಯ ಮೇರೆಗೆ, ಆಕೆಯೊಂದಿಗೆ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರು ರಾಜಾ ರಘುವಂಶಿಯ ಹತ್ಯೆಗೆ ಸುಪಾರಿ ಪಡೆದಿದ್ದಾಗಿ ಒಪ್ಪಿಕೊಂಡಿದ್ದಾರೆ.

ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಮೇಘಾಲಯ ಪೊಲೀಸರ ಕಾರ್ಯಕ್ಕೆ ಮುಖ್ಯಮಂತ್ರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೇಘಾಲಯ ಮತ್ತು ಇಂದೋರ್‌ನ ಪೊಲೀಸರು ಜಂಟಿಯಾಗಿ ಘಾಜಿಪುರಕ್ಕೆ ಹೋಗಿ ತನಿಖೆ ಮುಂದುವರಿಸಲಿದ್ದಾರೆ. ಸೋನಮ್‌ನ್ನು ಹತ್ಯೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸುವ ಸಾಧ್ಯತೆಯೂ ಇದೆ.

RELATED ARTICLES
- Advertisment -
Google search engine

Most Popular