ರಾಯಚೂರು: ರಾಯಚೂರು ಜಿಲ್ಲೆಯ ದೇವದುರ್ಗ ಮತ್ತು ಲಿಂಗಸುಗೂರಿನ ಇಬ್ಬರು ಪಿಡಿಓಗಳನ್ನ ಕರ್ತವ್ಯ ಲೋಪ ಹಾಗೂ ಹಣಕಾಸು ದುರ್ಬಳಕೆಯ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.
ಚಿಂಚೋಡಿ ಗ್ರಾಪಂನ ಪಿಡಿಓ ಶಿವರಾಜ ಮತ್ತು ಕೋಠಾ ಗ್ರಾಪಂನ ಪಿಡಿಓ ಗಂಗಮ್ಮ ಅವರನ್ನು ರಾಯಚೂರು ಜಿಪಂ ಸಿಇಒ ಪಾಂಡ್ವೇ ರಾಹುಲ್ ತುಕಾರಾಮ್ ಅಮಾನತು ಮಾಡುವ ಆದೇಶ ನೀಡಿದ್ದಾರೆ.
ಗಂಗಮ್ಮ ವಿರುದ್ಧ 15ನೇ ಹಣಕಾಸು ಯೋಜನೆಯಡಿ ₹26.71 ಲಕ್ಷದ ದುರ್ಬಳಕೆ ಆರೋಪ ಕೇಳಿಬಂದಿದೆ. ಬಿಲ್ಗಳಲ್ಲಿ ವ್ಯತ್ಯಾಸ ಮಾಡಿ ಹಣ ಹಿಂಪಡೆಯಲಾಗಿದೆ ಎನ್ನಲಾಗಿದೆ.
ಶಿವರಾಜ ₹52.81 ಲಕ್ಷದ ಅಪೂರ್ಣ ದಾಖಲೆ ನೀಡಿದ್ದು, ₹14.77 ಲಕ್ಷದ ಬಳಸಿದ ಹಣಕ್ಕೆ ದಾಖಲೆ ನೀಡಿಲ್ಲ. ಈ ಕಾರಣದಿಂದ ಸರ್ಕಾರಿ ಬೊಗ್ಗಸಕ್ಕೆ ನಷ್ಟ ಉಂಟುಮಾಡಿದ್ದಾರೆ ಎನ್ನಲಾಗಿದೆ.