Sunday, April 20, 2025
Google search engine

Homeರಾಜ್ಯಉಡುಪಿ: ತೊಟ್ಟಂ ಬೀಚ್‌ ನಲ್ಲಿ ಮುಳುಗುತ್ತಿದ್ದವರ ರಕ್ಷಣೆ

ಉಡುಪಿ: ತೊಟ್ಟಂ ಬೀಚ್‌ ನಲ್ಲಿ ಮುಳುಗುತ್ತಿದ್ದವರ ರಕ್ಷಣೆ

ಉಡುಪಿ: ಸಮುದ್ರದ ಅಲೆಯಲ್ಲಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಿರುವ ಘಟನೆ ಮಲ್ಪೆಯ ತೊಟ್ಟಂ ಬೀಚ್‌ ನಲ್ಲಿ ಗುರುವಾರ ಮುಂಜಾನೆ(ಮೇ.8 ರಂದು) ನಡೆದಿದೆ.

ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ 6 ಜನರ ಯುವಕರ ಗುಂಪೊಂದು ಸ್ನಾನಕ್ಕೆಂದು ಸಮುದ್ರಕ್ಕಿಳಿದಾಗ ಈ ಘಟನೆ ನಡೆದಿದೆ.

ಮುಂಜಾನೆ 6:45 ರ ವೇಳೆಗೆ ತೊಟ್ಟಂ ಬೀಚ್‌ ನಲ್ಲಿ ಈಜುತ್ತಿದ್ದಾಗ, ಗುಂಪಿನ ಇಬ್ಬರು ಸದಸ್ಯರು ಅಲೆಗಳ ಹೊಡೆತಕ್ಕೆ ಸಿಲುಕಿಕೊಂಡಿದ್ದಾರೆ. ಅಲೆಗಳ ಅಬ್ಬರದಲ್ಲಿ ಮುಳುಗುತ್ತಿದ್ದ ಗೋಪಿನಾಥ್ (25) ರಂಗನಾಥ (26) ಅವರನ್ನು ತಕ್ಷಣವೇ ಬೀಚ್‌ ಲೈಫ್‌ ಗಾರ್ಡ್‌ ಸಿಬ್ಬಂದಿಗಳು ರಕ್ಷಿಸಿ ಮೇಲಕ್ಕೆ ತಂದಿದ್ದಾರೆ.

ಇತ್ತೀಚಿನ ಹವಾಮಾನ ಪರಿಸ್ಥಿತಿಗಳು ಮತ್ತು ಅಮಾವಾಸ್ಯೆ ದಿನದ ಪರಿಣಾಮದಿಂದ ಸಮುದ್ರದ ಅಲೆಗಳು ಬಹೃತ್‌ ಆಗಿರುತ್ತದೆ.

ಮಲ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -
Google search engine

Most Popular