ತುಮಕೂರು: ತುಮಕೂರಿನಲ್ಲಿ ತಿಪಟೂರು ತಾಲ್ಲೂಕಿನ ಬಜಗೂರು ಗ್ರಾಮಸ್ಥರು ಮಳೆಗಾಗಿ ವಿಶಿಷ್ಟ ಆಚರಣೆಯ ಮೊರೆಹೋಗಿದ್ದಾರೆ.
ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪದ್ಧತಿಯಂತೆ ಮಳೆಗಾಗಿ ಚಿಕ್ಕ ಮಕ್ಕಳಿಗೆ ಗ್ರಾಮಸ್ಥರು ಮದುವೆ ಮಾಡಿಸಿದ್ದಾರೆ.
8 ದಿನಗಳ ಕಾಲ ಕಳಸ ಪೂಜೆ, 9ನೇ ದಿನ ಚಂದಮಾಮನ ಪೂಜೆ ಮಾಡಿ ಬಳಿಕ ಚಿಕ್ಕ ಮಕ್ಕಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದೆ.
ಅಂತೆಯೇ ಮದುಮಗನಾಗಿ ಸಿಂಧು, ಮದುಮಗಳಾಗಿ ಕೃತಿಕಾಳಿಗೆ ವೇಷ ತೊಡಿಸಿ ಮದುವೆ ಮಾಡಲಾಗಿದೆ.