Friday, April 11, 2025
Google search engine

HomeUncategorizedರಾಷ್ಟ್ರೀಯಇಂದು ವಾಜಪೇಯಿ ಜನ್ಮಶತಮಾನೋತ್ಸವ: ಅಟಲ್​​​​​ ಜೀಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಇಂದು ವಾಜಪೇಯಿ ಜನ್ಮಶತಮಾನೋತ್ಸವ: ಅಟಲ್​​​​​ ಜೀಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಶತಮಾನೋತ್ಸವದ ನಿಮಿತ್ತ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್​, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಹಲವು ಕೇಂದ್ರ ಸಚಿವರು ಮತ್ತು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಬುಧವಾರ ಬೆಳಗ್ಗೆ ವಾಜಪೇಯಿ ಅವರ ಸಮಾಧಿ ಇರುವ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಿರ್ಮಿಸಿರುವ ಸ್ಮಾರಕ ‘ಸದೈವ ಅಟಲ್‌’ ಪುಷ್ಪ ನಮನ ಸಲ್ಲಿಸಿದರು.

ಇನ್ನು ಈ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಅಟಲ್ ಬಿಹಾರಿ ವಾಜಪೇಯಿ ಅವರು 21ನೇ ಶತಮಾನದ ಭಾರತದ ಪರಿವರ್ತನೆಯ ಶಿಲ್ಪಿ ಎಂದು ಬಣ್ಣಿಸಿದ್ದಾರೆ. ಕ್ರೋನಿಸಂ ಮತ್ತು ನಿಶ್ಚಲತೆಯ ಆರ್ಥಿಕ ತತ್ತ್ವಶಾಸ್ತ್ರ ತೊರೆದು, ಭಾರತದ ಆರ್ಥಿಕತೆಯ ಉನ್ನತಿಗೆ ವೇದಿಕೆ ಕಲ್ಪಿಸುವ ಸುಧಾರಣೆಗಳನ್ನು ಆರಂಭಿಸಿದ ದೀಮಂತ ಎಂದು ಮೋದಿ ಗುಣಗಾನ ಮಾಡಿದ್ದಾರೆ.

ವಾಜಪೇಯಿ ಅವರ 100 ನೇ ಜನ್ಮದಿನದಂದು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನದಲ್ಲಿ ಮೋದಿ ಅವರು, ತಮ್ಮ ಸುದೀರ್ಘ ಸಂಸದೀಯ ಅಧಿಕಾರವನ್ನು ವಾಜಪೇಯಿ ಅವರು ಹೆಚ್ಚಾಗಿ ವಿರೋಧ ಪಕ್ಷದಲ್ಲೇ ಕಳೆದರು. ಕಾಂಗ್ರೆಸ್ ಅವರನ್ನು ದೇಶದ್ರೋಹಿ ಎಂದು ಕರೆದರೂ ಅವರೆಂದೂ ಯಾವುದೇ ಕಹಿ ಭಾವನೆ ಹೊಂದಿರಲಿಲ್ಲ ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು, ಅಸಂಖ್ಯಾತ ಜನರಿಗೆ ಸ್ಫೂರ್ತಿ ನೀಡುತ್ತಿರುವ ರಾಜನೀತಿಜ್ಞರಾಗಿ ಎತ್ತರದಲ್ಲಿ ನಿಂತಿದ್ದಾರೆ ಎಂದು ಮೋದಿ ಬಣ್ಣಿಸಿದ್ದಾರೆ. ಸುಮಾರು ಒಂಬತ್ತು ವರ್ಷಗಳಲ್ಲಿ ನಾಲ್ಕು ಲೋಕಸಭೆ ಚುನಾವಣೆಗಳು ನಡೆದಿದ್ದ 90ರ ದಶಕದ ರಾಜಕೀಯ ಅಸ್ಥಿರತೆಯಿಂದಾಗಿ ಜನರು ಅಸಹನೆ ಮತ್ತು ಸರ್ಕಾರದ ಸಾಮರ್ಥ್ಯದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದರು. ಈ ಸಮಯದಲ್ಲಿ ವಾಜಪೇಯಿ ಅವರು ಸ್ಥಿರ ಮತ್ತು ಪರಿಣಾಮಕಾರಿ ಆಡಳಿತವನ್ನು ನೀಡಿದರು ಎಂದು ಪ್ರಧಾನಿ ನೆನಪು ಮಾಡಿಕೊಂಡಿದ್ದಾರೆ.

ವಿನಮ್ರ ಬೇರುಗಳಿಂದ ಬಂದ ವಾಜಪೇಯಿ ಅವರು ಸಾಮಾನ್ಯ ನಾಗರಿಕರ ಹೋರಾಟಗಳನ್ನು ಮತ್ತು ಪರಿಣಾಮಕಾರಿ ಆಡಳಿತದ ಪರಿವರ್ತಕ ಶಕ್ತಿಯನ್ನು ಅರಿತುಕೊಂಡಿದ್ದರು, ಅವರ ನಾಯಕತ್ವದ ದೀರ್ಘಾವಧಿಯ ಪ್ರಭಾವವು ಹಲವಾರು ಕ್ಷೇತ್ರಗಳಲ್ಲಿ ಇಂದು ನಮ್ಮ ನಿಮ್ಮಲ್ಲರಿಗೂ ಗೋಚರಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ. ಅವರ ಯುಗವು ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ ಮತ್ತು ಸಂವಹನ ಜಗತ್ತಿನಲ್ಲಿ ದೈತ್ಯಾಕಾರದ ಪ್ರಗತಿಗೆ ಮೇಲ್ಪಂಕ್ತಿ ಹಾಕಿ ಹೋಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular