ಮೈಸೂರು: ಮೈಸೂರಿನ ಹಿರಿಯ ಪತ್ರಕರ್ತ ರಾಜ್ ಕುಮಾರ್ ಭಾವಸಾರ್ ಅವರ ಧರ್ಮಪತ್ನಿ ಶ್ರೀಮತಿ ಎಂ. ವೀಣಾ (60) ಅವರು ಸುದೀರ್ಘ ಕಾಲದ ಅನಾರೋಗ್ಯದಿಂದಾಗಿ ಇಂದು ಬೆಳಿಗ್ಗೆ ಕಾಮಾಕ್ಷಿ ಆಸ್ಪತ್ರೆಯಲ್ಲಿ ಧೈವಾಧೀನರಾಗಿದ್ದಾರೆ.
ಕನಕದಾಸ 3ನೇ ಹಂತದ ಎ ಬ್ಲಾಕ್, 12ನೇ ಕ್ರಾಸ್, ಜೋಡಿ ಬೇವಿನ ಮರದ ಸಮೀಪವಿರುವ (ವಾಟರ್ ಟ್ಯಾಂಕ್ ಮತ್ತು ಮ್ಯಾಜಿಕ್ ಟ್ರೀ ಸ್ಕೂಲ್ ಬಳಿ) ಅವರ ಮನೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸಂಜೆ 4.30ಕ್ಕೆ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.