Saturday, April 19, 2025
Google search engine

Homeಸ್ಥಳೀಯಕವಿತೆಯ ಬೆನ್ನತ್ತಿ ನಾವು ಹೋಗಬೇಕು,ವಿನಹ ಕವಿಗೋಷ್ಠಿ ಬೆನ್ನತ್ತಿ ಅಲ್ಲ: ಸವಿತಾ ನಾಗಭೂಷಣ್

ಕವಿತೆಯ ಬೆನ್ನತ್ತಿ ನಾವು ಹೋಗಬೇಕು,ವಿನಹ ಕವಿಗೋಷ್ಠಿ ಬೆನ್ನತ್ತಿ ಅಲ್ಲ: ಸವಿತಾ ನಾಗಭೂಷಣ್


ಮೈಸೂರು: ಕವಿತೆಯ ಬೆನ್ನತ್ತಿ ನಾವು ಹೋಗಬೇಕು,ವಿನಹ ಕವಿಗೋಷ್ಠಿ ಬೆನ್ನತ್ತಿ ಅಲ್ಲ ಎಂದು ಖ್ಯಾತ ಕವಯಿತ್ರಿ ಸವಿತಾ ನಾಗಭೂಷಣ್ ರವರು ತಿಳಿಸಿದರು.

ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮೊದಲ ಬಾರಿಗೆ ಕವಿಗೋಷ್ಠಿ ಅಧ್ಯಕ್ಷತೆ ವಯಿಸಿದ್ದು ನನಗೆ ಬಹಳ ಸಂತೋಷ ಕೊಟ್ಟಿದೆ. ವೇದಿಕೆಗೂ ನನಗೂ ಯಾವ ರೀತಿಯಾದ ನಂಟು ಇದೆ ಎಂಬುದನ್ನು ನಾನು ಸ್ಮರಿಸುತ್ತಿದ್ದೆ ಎಂದರು.

ನಾನು ಕಲಾವಿದೆ ಆದರೆ ಇಲ್ಲಿ ಬಹಳಷ್ಟು ಕವಿಯತ್ರಿಯರು ಕವನ ಆಸ್ವಾದಿಸುವವರಿದ್ದಾರೆ. ಮೈಸೂರು ದಸರಾದಲ್ಲಿ ಕವಿಗೋಷ್ಠಿಗಳನ್ನು ನಡೆಸಿ, ತಾಯಿ ಕನ್ನಡಾಂಬೆಗೆ ಈ ತರಹದ ಒಂದು ಸೇವೆಯು ಪ್ರತಿ ವರ್ಷ ಸಾಗುತ್ತಿರಲಿ ಎಂದರು.

ಕವಿಗಳಾದ ಸತೀಶ್ ಕುಲಕರ್ಣಿ ಅವರು ಮಾತನಾಡಿ ನಾನು ಮಣ್ಣಿನ ಮಗನಲ್ಲ ನಾನು ಹೆಣ್ಣಿನ ಮಗ. ಬಹಳಷ್ಟು ಕವಿಯತ್ರಿಯರ ಮಧ್ಯೆ ನಾನು ವೇದಿಕೆಯಲ್ಲಿರುವುದು ಬಹಳ ವಿಶೇಷವೆನಿಸುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳ್ಳಿತೆರೆ ಕಿರುತೆರೆ ಹಿರಿಯ ಕಲಾವಿದೆಯಾದ ಚಿತ್ಕಳಾ ಬಿರಾದಾರ್ ಅವರು ನಮ್ಮೊಳಗೆ ಒಬ್ಬ ಕವಿ ಇದ್ದಾನೆ ಎನ್ನುವುದನ್ನೆ ಇತ್ತೀಚಿನವರು ಮರೆತಿದ್ದಾರೆ.ಮಹಿಳೆಯರು ಹೆಚ್ಚಾಗಿ ಬರೆಯುವ ಕವಿತೆಗಳೆಲ್ಲವು ಮಹಿಳೆಯರ ಅಳಲು ಬಗ್ಗೆಯೇ ಹೆಚ್ಚಾಗಿ ಬರೆಯುತ್ತಾರೆ, ಆದಷ್ಟು ಅದನ್ನೇಲ್ಲ ನಿಲ್ಲಿಸಿ ಸಾಧನೆ ಮಾಡುತ್ತಿರುವವರ ಮಹಿಳೆಯರ ಬಗ್ಗೆ, ಸಂತೋಷದ ವಿಷಯಗಳ ಬಗ್ಗೆ ಹೆಚ್ಚಾಗಿ ಕವಿತೆಗಳನ್ನು ಬರೆದರೆ ಬೇರೆಯವರಿಗೂ ಇದು ಸ್ಪೂರ್ತಿ ಆಗುತ್ತದೆ ಎಂದು ಹೇಳಿದರು.

ಇತ್ತೀಚಿನ ಮಕ್ಕಳಿಗೆ ಕನ್ನಡದ ಪದ್ಯಗಳೇ ಬರುತ್ತಿಲ್ಲ. ಯಾವ ಮಕ್ಕಳನ್ನು ಕೇಳಿದರು ಸಹ ಇಂಗ್ಲೀಷ್ ಭಾಷೆಯ ಪದ್ಯಗಳೇ ಅವರ ಬಾಯಲ್ಲಿ ಬರುತ್ತವೆ ಪೋಷಕರಾದವರು ಈ ಕಡೆ ಗಮನ ಹರಿಸಬೇಕು. ಸಾಧ್ಯವಾದಷ್ಟೂ ಇತ್ತೀಚಿನ ಮಕ್ಕಳನ್ನು ಕವಿತೆ, ನಾಟಕ, ಸಾಹಿತ್ಯ, ಕವಿತೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಇತ್ತೀಚಿನ ಜನರು ಪರಸ್ಪರ ಮಾತನಾಡುವುದೇ ಕಷ್ಟ ಆಗಿದೆ. ಅಂತಹದರಲ್ಲಿ ಕವಿತೆಗಳನ್ನು ಎಲ್ಲಿ ಕೇಳುವರು ಎಂಬ ಪ್ರಶ್ನೆಗೆ ಬಂದು ನಿಂತಿದೆ ಇತ್ತೀಚಿನ ಪ್ರಪಂಚ. ಇದೆಲ್ಲಾ ಬಹುಶಃ ನಾಲ್ವಡಿ ಕೃಷ್ಣ ರಾಜ ಒಡೆಯರಿಗೆ ಮೊದಲೇ ಅರಿವಿತ್ತೇನೋ ಅದಕ್ಕಾಗಿಯೇ ಪ್ರತಿವರ್ಷ ದಸರಾದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಎಂದು ಹೇಳಿದರು.

ಆನೇಕ ಜಿಲ್ಲೆಗಳಿಂದ ಬಂದಿರುವಂತಹ ಮಹಿಳಾ ಕವಿಯತ್ರಿಯರು ತಮ್ಮ ಕವಿತೆಗಳ ರಸದೌತಣವನ್ನು ಉಣಬಡಿಸಿದರು.

ಮಮತಾ ಕೋಲಾರ, ದೀಪ್ತಿ ಭದ್ರಾವತಿ, ಶ್ವೇತ ಮಂಡ್ಯ, ವಿಭಾ ಪುರೋಹಿತ ಬೆಂಗಳೂರು, ವಿಜಯಲಕ್ಷ್ಮಿ ಮೈಸೂರು ಇನ್ನೂ ಆನೇಕ ಕವಿಯತ್ರಿಯರು ಮಹಿಳಾ ಕವಿಗೋಷ್ಠಿಯಲ್ಲಿ ತಮ್ಮ ಕವಿತೆಗಳ ಸಾರವನ್ನು ವಿವರಿಸುವುದರ ಮೂಲಕ ’ಹೆಣ್ಣು ಅಬಲೆಯಲ್ಲ ಸಬಲೆ’ ಆಕೆಯ ಶಕ್ತಿ, ಸಾಮರ್ಥ್ಯ, ಸಾಧನೆಯ ಕುರಿತ ಕವನಗಳು ಸಾಹಿತ್ಯ ಪ್ರೇಮಿಗಳ ಗಮನ ಸೆಳೆಯಿತು.

ಹಲವಾರು ಜಿಲ್ಲೆಗಳಿಂದ ಬಂದಂತಹ ಮಹಿಳಾ ಕವಯಿತ್ರಿಯರನ್ನೂ ವೇದಿಕೆ ಮೇಲೆ ಕರೆದು ಕವಿತೆ ವಾಚನಗಳನ್ನು ಮಾಡಿಸಿ ಕವಿತೆ ವಾಚನ ಮಾಡಿದ ಎಲ್ಲಾ ಕವಯಿತ್ರಿಯರಿಗೂ ವೇದಿಕೆ ಮೇಲೆ ಅಥಿತಿಗಳಿಂದ ಗೌರವ ಸಮರ್ಪಣೆಯನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ವಿಜಯಲಕ್ಷ್ಮಿ ಕರಿಕಲ್, ಡಾ ಎಂ ದಾಸೇಗೌಡರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular