Monday, June 9, 2025
Google search engine

Homeಅಪರಾಧತಿಮಿಂಗಿಲ ವಾಂತಿ(Ambergris) ಸಾಗಣೆ: ಇಬ್ಬರ ಬಂಧನ

ತಿಮಿಂಗಿಲ ವಾಂತಿ(Ambergris) ಸಾಗಣೆ: ಇಬ್ಬರ ಬಂಧನ

ಕೊಯಮತ್ತೂರಿನ ಕಡೆಗೆ ತಿಮಿಂಗಲ ವಾಂತಿ ಮಾರಾಟ ದಳ ಪೊಲೀಸರ ಕಾರ್ಯಾಚರಣೆ

ಕೊಳ್ಳೇಗಾಲ: ಮೂರು ಕೆ.ಜಿ. ತೂಕದ ತಿಮಿಂಗಿಲ ವಾಂತಿ(Ambergris) ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರದಳ ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ಮೂಲದ ಆನಂದ್ ಮಂಜುನಾಥ್ ದೇವಾಡಿಗ(48), ಬಾಬು ಅಣ್ಣಪ್ಪ ನಾಯಕ(49) ಬಂಧಿತರು. ತಾಲೂಕಿನ ಟಗರಪುರ ಸಮೀಪ ಕಾರಿನಲ್ಲಿ ಅಪರಿಚಿತರು ತಮಿಳುನಾಡಿನ ಮೂಲಕ ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ತಿಳಿದ ಅರಣ್ಯ ಸಂಚಾರ ದಳದ ಸಬ್‌ಇನ್ಸ್‌ಪೆಕ್ಟರ್‌ ವಿಜಯರಾಜ್ ಮತ್ತು ತಂಡದವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ತಿಮಿಂಗಿಲ ವಾಂತಿ, 1 ಆಲ್ಟೊ ಕಾರು, 7000 ರೂ. ನಗದು, ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಭಟ್ಕಳದ ಸಮೀಪ ಸಮುದ್ರದ ತೀರದಲ್ಲಿ ತಿಮಿಂಗಲ ವಾಂತಿ ಸಿಕ್ಕಿದ್ದು, ಇದನ್ನು ಮಾರಾಟ ಮಾಡಲು ಕೊಯಮತ್ತೂರಿನ ಕಡೆಗೆ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

RELATED ARTICLES
- Advertisment -
Google search engine

Most Popular