Wednesday, August 6, 2025
Google search engine

Homeರಾಜ್ಯಸುದ್ದಿಜಾಲಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಯದುಕುಮಾರ್, ಉಪಾಧ್ಯಕ್ಷರಾಗಿ ದಿಡ್ಡಹಳ್ಳಿ ಪ್ರಸನ್ನ ಆಯ್ಕೆ

ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಯದುಕುಮಾರ್, ಉಪಾಧ್ಯಕ್ಷರಾಗಿ ದಿಡ್ಡಹಳ್ಳಿ ಪ್ರಸನ್ನ ಆಯ್ಕೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಸಾಲಿಗ್ರಾಮ ತಾಲ್ಲೂಕಿನ ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಯದು ಕುಮಾರ್ ಮತ್ತು ಉಪಾಧ್ಯಕ್ಷರಾಗಿ ದಿಡ್ಡಹಳ್ಳಿ ಪ್ರಸನ್ನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಾಲಿ ಅಧ್ಯಕ್ಷರಾಗಿದ್ದ ಸ್ವಾಮಿ ಹಾಗೂ ಉಪಾಧ್ಯಕ್ಷರಾಗಿದ್ದ ಪೂರ್ಣಿಮಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯದುಕುಮಾರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ದಿಡ್ಡಹಳ್ಳಿ ಪ್ರಸನ್ನ ಅವರನ್ನ ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಸಿಡಿಒ ರವಿಯವರು ಇವರಿಬ್ಬರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ನೂತನ ಅಧ್ಯಕ್ಷ ಎದು ಕುಮಾರ್ ಮಾತನಾಡಿ ಸಂಘದ ಒಂದು ಭಾಗದ ಕಟ್ಟಡ ಶಿಥಿಲಗೊಂಡಿದ್ದು ಶಾಸಕ ಡಿ ರವಿಶಂಕರ್ ಅವರ ಸಹಕಾರದಲ್ಲಿ ಅನುದಾನ ಪಡೆದು ಸಂಘಕ್ಕೆ ನೂತನ ಕಟ್ಟಡವನ್ನು ಕಟ್ಟಲು ಹಾಗೂ ಸಂಘದ ಆಡಳಿತ ಪಾರದರ್ಶಕವಾಗಿ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಜತಗೆ ಜಿಲ್ಲಾ ಸಂಘದಿಂದ ಸಿಗುವ ಸವಲತ್ತುಗಳನ್ನು ರೈತರಿಗೆ ಒದಗಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಕಾಂಗ್ರೇಸ್ ಮುಖಂಡರಾದ ವಕೀಲ ಪಣೀತ್,ಸಚಿನ್, ಅನಿಲ್, ಸಂಜಯ್ ,ಚಂದನ್, ಶ್ರೀನಿವಾಸ್, ಟೈಲರ್ ಬಲರಾಂ, ವೆಂಕಟೇಶ್, ಕೃಷ್ಣ್ನೆಗೌಡ ಮುಂತಾದವರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಎಚ್.ಜೆ. ರಮೇಶ್, ರಂಗೇಗೌಡ, ಎಚ್.ಅರ್. ಪರಶುರಾಮ್, ಬುದ್ದಿಸಾಗರ, ಲಲಿತ, ಭಾರತಿ, ನಾಗರಾಜ್, ಸಂಘದ ಸಿಇಒ ಶಿವಶಂಕರ್, ಪರೀಕ್ಷಕ ಎಚ್.ಎಲ್. ಮಹಾದೇವ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular